ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕೋವಿಡ್ 19 ಆತಂಕದ ನಡುವೆ ರಾಜ್ಯದಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆಗಳನ್ನ ನಡೆಸಲಾಯ್ತು. ಇದೀಗ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಎದುರು ನೋಡ್ತಿದ್ದಾರೆ. ಈ ಬಗ್ಗೆ ಮಾತ್ನಾಡಿರುವ ಶಿಕ್ಷಣ ಸಚಿವರು ಫಲಿತಾಂಶದ ದಿನಾಂಕ ಘೋಷಣೆ ಮಾಡಿದ್ದಾರೆ.
ಆಗಸ್ಟ್ 6 ಅಥವ 8ಕ್ಕೆ ಎಸ್ಎಸ್ಎಲ್ ಸಿ ಫಲಿತಾಂಶ ಬರುತ್ತೆ ಎಂದಿದ್ದಾರೆ. 8.5 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಇನ್ನು ಪ್ರತಿವರ್ಷ 240 ದಿನಗಳು ಶೈಕ್ಷಣಿಕ ವರ್ಷ ಸಿಗ್ತಿತ್ತು. ಈ ವರ್ಷದ 120 ರಿಂದ 140 ದಿನಗಳು ಸಿಗಲಿವೆ. ಹೀಗಾಗಿ ಶೇಕಡ 30ರಷ್ಟು ಪಠ್ಯ ತೆಗೆಯಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ಈಗಾಗ್ಲೇ ಎಲ್ಲೆಡೆ ಪಠ್ಯಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆದಿದೆ. ವಿರೋಧ ವ್ಯಕ್ತವಾಗಿದೆ. ಹೀಗಾಗಿ ಸಧ್ಯಕ್ಕೆ ಪಠ್ಯ ಬಿಡುಗಡೆಯನ್ನ ತೆಡೆ ಹಿಡಿಯಲಾಗಿದೆ. ವೈಜ್ಞಾನಿಕ ಆಧಾರದ್ಮೇಲೆ ಏನು ಮಾಡಬೇಕು ಅನ್ನೋದನ್ನ ಹೇಳುತ್ತೇವೆ ಎಂದಿದ್ದಾರೆ.