ಗಂಡಸು ಅಲ್ಲ, ಹೆಂಗಸು ಅಲ್ಲದ ಸರ್ಕಾರ: ಸಿ.ಎಂ ಇಬ್ರಾಹಿಂ

244

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ, ಗಂಡಸು ಅಲ್ಲ ಹೆಂಗಸು ಅಲ್ಲದ ಸರ್ಕಾರವಿದು. ಇದನ್ನು ಬೇಗ ಮಂಗಳಮುಖಿ ಸರ್ಕಾರ ತೆಗೆಯಬೇಕು ಎಂದು ವ್ಯಂಗ್ಯವಾಡಿದ್ದಾರೆ.

ಹೆಂಗಸರಾದರೆ ಹೆಂಗಸರನ್ನು ಕಳುಹಿಸಬಹುದು. ಗಂಡಸರಾದರೆ ಗಂಡಸರನ್ನು ಕಳುಹಿಸಬಹುದು. ಇವರು ಈ ಎರಡೂ ಅಲ್ಲ. ಚಪ್ಪಾಳೆ ತಟ್ಟುತ್ತಾರೆ. ನಕ್ಕು ಬಿಡುತ್ತಾರೆ. ಏನು ಮಾಡೋಣ ಎಂದು ಎಂದಿನಂತೆ ತಮ್ಮದೆ ಶೈಲಿಯಲ್ಲಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಅಪಹಾಸ್ಯ ಮಾಡಿದ್ದಾರೆ.

ನಾನು ಪರಿಷತ್ ಟಿಕೆಟ್ ಆಕಾಂಕ್ಷಿ ಆಗಿರಲಿಲ್ಲ. ಪಕ್ಷದ ಅಧ್ಯಕ್ಷನಾಗಿ ಉದಾತ್ತ ಮನೋಭಾವ ಇರಬೇಕು. ಬಡಿಸೋ ಜಾಗದಲ್ಲಿದ್ದು ನಾವೇ ಊಟ ಮಾಡೋಕೆ ಕೂತರೆ ಹೇಗೆ ಎಂದು, ಪರಿಷತ್ ಚುನಾವಣೆಯ ಟಿಕೆಟ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು.




Leave a Reply

Your email address will not be published. Required fields are marked *

error: Content is protected !!