ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಸಿ.ಎಂ ಇಬ್ರಾಹಿಂ ಅವರನ್ನು ಉಚ್ಛಾಟನೆ ಮಾಡಲಾಗಿದೆ. ಈ ಬಗ್ಗೆ ಮಾತನಾಡಿರುವ ಇಬ್ರಾಹಿಂ, ದೇವೇಗೌಡರನ್ನು ನಾನು ತಂದೆ ಸಮಾನರು ಅಂದುಕೊಂಡಿದ್ದೆ. ಇದೇನಾ ಮಗನಿಗೆ ಕೊಡುವ ಪ್ರೀತಿ ಎನ್ನುತ್ತಲೇ ಇನ್ನೂ ಎಷ್ಟು ಮನೆ ಹಾಳಮಾಡಬೇಕು ಅಂತಾ ಮಾಡಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಕುಟುಂಬದ ಆಸ್ತಿ ಎಂದು ತೋರಿಸಿಬಿಟ್ಟಿರಿ. ಗೌಡ್ರಗೆ ಪ್ರಜ್ಞೆ ಬೇಡ್ವಾ? ನನ್ನ ಜೊತೆ ಮಾತನಾಡಬೇಕಂತ ಅನಸಿಲಿಲ್ಲವಾ? ಹಗಲು, ರಾತ್ರಿ ಓಡಾಡಿ ಅವರ ಮಗನನ್ನು ಗೆಲ್ಲಿಸಿದ್ದಕ್ಕೆ ಒಳ್ಳೆಯ ಬಹುಮಾನ ಕೊಟ್ಟಿದ್ದಾರೆ. ಇನ್ನೂ 4 ವರ್ಷ ಇದ್ದ ಪರಿಷತ್ತಿನ ಸ್ಥಾನ ಬಿಟ್ಟು ಬಂದೆ. ಯಾವ ಒಕ್ಕಲಿಗ ನಾಯಕರನ್ನು ಬೆಳೆಸಿದ್ದೀರಿ. ಇಷ್ಟು ದೊಡ್ಡ ವಯಸ್ಸಿನಲ್ಲಿ ನಿಮ್ಮಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.