ಪ್ರಜಾಸ್ತ್ರ ಅಪರಾಧ ಸುದ್ದಿ
ಗುರ್ ಗ್ರಾಮ್: ರಾಮಲೀಲಾ ನೋಡಲು ಹೋದ ಯುವಕನ ಮೇಲೆ ಗುಂಡಿನ ದಾಳಿ ಹತ್ಯೆ ಮಾಡಿದ ಘಟನೆ ಗುರುವಾರ ಮಧ್ಯರಾತ್ರಿ ನವದೆಹಲಿಯ ಭೀಮ ನಗರ ಪ್ರದೇಶದಲ್ಲಿ ನಡೆದಿದೆ. ಆಶಿಶ್(20) ಕೊಲೆಯಾದ ಯುವಕ.
ಡಿಜೆ ಆಪರೇಟರ್ ಜೊತೆ ಕೆಲಸ ಮಾಡುತ್ತಿದ್ದ ಆಶಿಶ್ ಸ್ನೇಹಿತರೊಂದಿಗೆ ರಾಮಲೀಲಾ ನೋಡಲು ಹೋಗಿದ್ದಾನೆ. ಮಧ್ಯರಾತ್ರಿ ಸುಮಾರು 1 ಗಂಟೆ ಸಮಯದಲ್ಲಿ ಗುಂಡಿನ ದಾಳಿ ನಡೆಸಲಾಗಿದೆ. ನಿಶಿ ಹಾಗೂ ರೋಹನ್ ಎಂಬುವರು ಗುಂಡು ಹಾರಿಸಿದ್ದಾರೆ ಎಂದು ಮೃತ ಆಶಿಶ್ ಸ್ನೇಹಿತರಾದ ಕಿರಣ್, ಧೀರಜ್ ಮಾಹಿತಿ ನೀಡಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು, ತನಿಖೆ ನಡೆಯುತ್ತಿದೆ.