ಹೇಳಿದ್ದು ರಾಮರಾಜ್ಯ.. ಮಾಡಿದ್ದು ಗೂಂಡಾರಾಜ್ಯ: ರಾಗಾ

336

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಉತ್ತರ ಪ್ರದೇಶ ಯೋಗಿ ಆದಿತ್ಯನಾಥ ಸರ್ಕಾರದ ವಿರುದ್ಧ ಕಾಂಗ್ರಸ್ ಸಂಸದ ರಾಹುಲ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪತ್ರಕರ್ತ ವಿಕ್ರಂ ಜೋಶಿ ಹತ್ಯೆ ಸಂಬಂಧ ಮಾತ್ನಾಡಿರುವ ರಾಹುಲ ಗಾಂಧಿ, ಹೇಳಿದ್ದು ರಾಮರಾಜ್ಯ. ಮಾಡಿದ್ದು ಗೂಂಡಾರಾಜ್ಯವೆಂದು ವಾಗ್ದಾಳಿ ನಡೆಸಿದ್ದಾರೆ.

ಸಹೋದರನ ಮಗಳ ಮೇಲಿನ ದೌರ್ಜನ್ಯವನ್ನ ವಿರೋಧಿಸಿದ್ದಕ್ಕೆ ಪತ್ರಕರ್ತ ವಿಕ್ರಂ ಜೋಶಿ ಹತ್ಯೆಯಾಗಿ ಹೋದರು. ವಿಕ್ರಂ ಅವರನ್ನ ಕಳೆದುಕೊಂಡಿರುವ ಕುಟುಂಬಕ್ಕೆ ನನ್ನ ಸಂತಾಪ ಎಂದಿದ್ದಾರೆ. ಕಳೆದ ಸೋಮವಾರ ವಿಕ್ರಂ ಅವರ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ರು.

ಗಂಭೀರವಾಗಿ ಗಾಯಗೊಂಡಿದ್ದ ವಿಕ್ರಂ ಆಸ್ಪತ್ರೆಯಲ್ಲಿ ಇಂದು ಸಾವನ್ನಪ್ಪಿದ್ದಾರೆ. ಈ ಘಟನೆ ಸಂಬಂಧ 9 ಮಂದಿಯನ್ನ ಬಂಧಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!