ಯುವಕನ ಕೊಲೆಯ ಹಿಂದಿನ ಕಾರಣ ಏನು ಗೊತ್ತಾ?

302

ಪ್ರಜಾಸ್ತ್ರ ಅಪರಾಧ ಸುದ್ದಿ

ವಿಜಯಪುರ: ಜಿಲ್ಲೆಯ ಆಲಮೇಲ ಪೊಲೀಸ್ ಠಾಣೆ ವ್ಯಾಪ್ತಿಯ ಕಡಣಿ ಗ್ರಾಮದಲ್ಲಿ ಬುಧವಾರ ಯುವಕ ಪ್ರಶಾಂತ್ ಕ್ಷತ್ರಿ ಎಂಬಾತನನ್ನು ಕೊಲೆ ಮಾಡಲಾಗಿದೆ. 8 ಜನ ಆರೋಪಿಗಳು ಕೂಡಿಕೊಂಡು ಈ ಕೃತ್ಯ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಬಸೀರ್ ಮುಲ್ಲಾ, ರಿಯಾಜ್ ಮುಲ್ಲಾ, ಲಾಲಸಾಬ್ ಮುಲ್ಲಾ, ಶಕೀಲ್ ಮುಲ್ಲಾ, ರಾಜು ಮುಲ್ಲಾ, ರಸೀದ್ ಮೋರಟಗಿ, ಮೈನೂದ್ದಿನ್ ಮುಲ್ಲಾ, ಆರೀಫ್ ಮುಲ್ಲಾ ಅನ್ನೋ ಆರೋಪಿಗಳು ಈ ಕೃತ್ಯವೆಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಭು ಕ್ಷತ್ರಿ ಎಂಬುವರು ದೂರು ದಾಖಲಿಸಿದ್ದಾರೆ.

ಕೊಲೆಗೆ ಕಾರಣ ಯುವತಿಯ ಜೊತೆಗೆ ಮಾತನಾಡಿದ್ದಕ್ಕೆ ಎಂದು ಹೇಳಲಾಗುತ್ತಿದೆ. ಯುವತಿಯ ಜೊತೆಗಿನ ಮಾತು ಓರ್ವ ಯವಕನನ್ನು ಬಲಿ ಪಡೆದಿದೆ. ಕೊಲೆಗೆ ಇನ್ನು ಏನೆಲ್ಲ ಕಾರಣಗಳಿರಬಹುದು ಅನ್ನೋದರ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!