ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಕನ್ನಡ ಚಿತ್ರರಂಗದಲ್ಲಿ ಹಲವು ಯಶಸ್ವಿ ಚಿತ್ರಗಳನ್ನ ನೀಡಿದ ನಿರ್ದೇಶಕ ರೇಣುಕಾ ಶರ್ಮಾ ಕೋವಿಡ್ ಸೋಂಕಿನಿಂದ ನಿಧನರಾಗಿದ್ದಾರೆ. ಎರಡು ದಿನಗಳ ಹಿಂದೆ ಅವರಿಗೆ ಸೋಂಕು ಕಾಣಿಸಿಕೊಂಡಿತ್ತು. ಬುಧವಾರ ತಡರಾತ್ರಿ ನಿಧನರಾಗಿದ್ದಾರೆ ಎಂದು ಹೇಳಲಾಗ್ತಿದೆ.
ಡಾ.ರಾಜಕುಮಾರ ನಟನೆಯ ಕವಿರತ್ನ ಕಾಳಿದಾಸ, ರವಿಚಂದ್ರನ್ ಅಭಿನಯದ ಕಿಂದರ ಜೋಗಿ, ಅಂಜದ ಗಂಡು ಸಿನಿಮಾ ಸೇರಿದಂತೆ ಶಬರಿ ಮಲೆ ಶ್ರೀಅಯ್ಯಪ್ಪ, ಅನುಪಮ ಸತ್ಕಾರ, ಭರ್ಜರಿ ಗಂಡು ಹಠಮಾರಿ ಹೆಣ್ಣು, ಮಹಾಸಾಧ್ವಿ ಮಲ್ಲಮ್ಮ ಸೇರಿದಂತೆ ಹಲವು ಚಿತ್ರಗಳನ್ನ ನಿರ್ದೇಶನ ಮಾಡಿದ್ದಾರೆ.