ನಟ ದೊಡ್ಡಣ್ಣ ಬಳಿಕ ಸಾಹಿತಿ ಸಿದ್ದಲಿಂಗಯ್ಯನವರ ನಿಧನದ ಸುಳ್ ಸುದ್ದಿ

442

ಪ್ರಜಾಸ್ತ್ರ ಸಾಹಿತ್ಯ ರಂಗಭೂಮಿ

ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಸದಾ ಒಂದಲ್ಲ ಒಂದು ಯಡವಟ್ಟು ನಡೆಯುತ್ತಲೇ ಇರುತ್ತವೆ. ಹತ್ತಾರು ಸುಳ್ಳು ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಹಿರಿಯ ನಟ ದೊಡ್ಡಣ್ಣನವರು ನಿಧನರಾಗಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಅದಕ್ಕೆ ಅವರು ಲೈವ್ ವಿಡಿಯೋ ಮಾಡಿ ನಾನು ಆರೋಗ್ಯವಾಗಿದ್ದೇನೆ ಅಂತಾ ಹೇಳುವಂತಾಯ್ತು.

ಇದೀಗ ಕರೋನಾ ಸೋಂಕಿಗೆ ಒಳಗಾಗಿರುವ ಹಿರಿಯ ಸಾಹಿತಿ ಡಾ.ಸಿದ್ದಲಿಂಗಯ್ಯನವರು ತೀರಿಕೊಂಡಿದ್ದಾರೆ ಅನ್ನೋ ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಈ ವದಂತಿ ಬಗ್ಗೆ ಅವರ ಪುತ್ರ ಡಾ.ಮಾನಸಾ ಸ್ಪಷ್ಟೀಕರಣ ಕೊಟ್ಟಿದ್ದಾರೆ. ನಮ್ಮ ತಂದೆಯವರು ಆರೋಗ್ಯವಾಗಿದ್ದಾರೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಹೇಳಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿರುವ ವದಂತಿ ಬಗ್ಗೆ ಕಿಡಿ ಕಾರಿದ್ದಾರೆ.




Leave a Reply

Your email address will not be published. Required fields are marked *

error: Content is protected !!