ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಮೇ 10ರಿಂದ ಮೇ 24ರ ತನಕ ಕರ್ನಾಟಕ ಸಂಪೂರ್ಣ ಲಾಕ್ ಡೌನ್ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಈ ಮೂಲಕ ಕರ್ನಾಟಕ 14 ದಿನ ಸಂಪೂರ್ಣ ಲಾಕ್ ಆಗಲಿದೆ.
ಬೆಳಗ್ಗೆ 6ರಿಂದ 9ಗಂಟೆಯ ತನಕ ತರಕಾರಿ ಮಾರಾಟಕ್ಕೆ ಅವಕಾಶ. ಅದು ತಳ್ಳು ಗಾಡಿಯ ಮೂಲಕ ಮಾತ್ರ ಮಾರಾಟ. ಹೋಟೆಲ್ ಗಳಲ್ಲಿ ಪಾರ್ಸಲ್ ಗೆ ಅವಕಾಶ. ಮದುವೆಗೆ ಅವಕಾಶ. ಆದ್ರೆ, 50 ಜನಕ್ಕೆ ಮಾತ್ರ ಒಪ್ಪಿಗೆ. ಇನ್ನು ಅಗತ್ಯ ವಸ್ತುಗಳ ಸೇವೆಗೆ ಬೆಳಗ್ಗೆ 6 ರಿಂದ 10 ಗಂಟೆಯ ತನಕ ಅವಕಾಶ ನೀಡಲಾಗಿದೆ.