ವಿಜಯಪುರ: ಕರೋನಾ ವೈರಸ್ ಹಿನ್ನೆಲೆಯ್ಲಲಿ 144 ಸೆಕ್ಷನ್ ಜಾರಿಯಾದ್ರು ರಸ್ತೆ ಬದಿಯಲ್ಲಿ ವ್ಯಾಪಾರ ಮಾಡ್ತಿರುವುದು ಕಂಡು ಬಂದಿದೆ. ಹೀಗಾಗಿ ಪೊಲೀಸ್ರು ಲಾಠಿ ಚಾರ್ಜ್ ನಡೆಸಿದ್ದಾರೆ. ಅಮವಾಸ್ಯೆಗೆಂದು ಹೂ ವ್ಯಾಪಾರ ಶುರು ಮಾಡಿಕೊಂಡಿದ್ದವರಿಗೆ ಪೊಲೀಸರು ಶಾಕ್ ನೀಡಿದ್ದಾರೆ.
ಬೈಕ್ ಸವಾರರಿಗೆ, ತಂಗಿನಕಾಯಿ ವ್ಯಾಪಾರಸ್ಥರಿಗೆ, ಅಂಗಡಿ ಬಂದ್ ಮಾಡದವರಿಗೆ ನಗರದ ಗಾಂಧಿ ಚೌಕ್ ಹಾಗೂ ಮಾರ್ಕೆಟ್ ನಲ್ಲಿ ಪೊಲೀಸ್ರು ಲಾಠಿ ರುಚಿ ತೋರಿಸಿದ್ದಾರೆ. ಗಾಂಧಿ ಚೌಕ ಸಿಪಿಐ ರವೀಂದ್ರ ನಾಯ್ಕೋಡಿ ಅವರು ಸೇರಿದಂತೆ ಪೊಲೀಸ್ ಸಿಬ್ಬಂದಿ ನಿರ್ಬಂಧವಿದ್ರೂ ಕ್ಯಾರೆ ಅನ್ನೋದಕ್ಕೆ ತಕ್ಕ ಶಿಕ್ಷೆ ಅನುಭವಿಸಿದ್ದಾರೆ.
ಹುಬ್ಬಳ್ಳಿಯಲ್ಲಿಯೂ ಲಾಠಿ ರುಚಿ:
ಹುಬ್ಬಳ್ಳಿ: ವಾಣಿಜ್ಯ ನಗರದಲ್ಲಿ ಸಂತೆ ಹಚ್ಚಲು ಮುಂದಾದ ಜನರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ನಗರದ ಸರಾಫಗಲ್ಲಿ ಸಂತೆಯ ಮಾರುಕಟ್ಟೆಯಲ್ಲಿ ಈ ಘಟನೆ ನಡೆದಿದೆ.
ನಿಷೇಧದ ನಡುವೆ ಸಂತೆ ಮಾರುಕಟ್ಟೆ ಹಚ್ಚಲು ಮುಂದಾದವರ ಮೇಲೆ ಲಾಠಿ ಬಿಸಿದ್ದರಿಂದ ಜನರು ಹಾಗೂ ವ್ಯಾಪಾರಸ್ಥರು ಧಿಕ್ಕಾಪಾಲಾಗಿ ಓಡಿದ್ದಾರೆ. ಮಾರುಕಟ್ಟೆಯಲ್ಲಿ ತರಕಾರಿ ಹೂ ಹಣ್ಣುಗಳ ಮಾರಾಟ ಮುಂದಾಗಿದ್ದರು. ಕಪ್ಯೂ ಹಿನ್ನೆಲೆಯಲ್ಲಿ ಸಂತೆ ಮಾರುಕಟ್ಟೆಯನ್ನ ಪೊಲೀಸರು ಹಾಗೂ ಪಾಲಿಕೆ ಸಿಬ್ಬಂದಿ ತೆರವು ಮಾಡಿದ್ದಾರೆ.