ಪೊಲೀಸ್ರ ಕ್ರಮಕ್ಕೆ ನಮ್ಮನ್ನ ದೂರಬೇಡಿ: ಸಿಎಂ ಎಚ್ಚರಿಕೆಯ ಸೂಚನೆ

356

ಬೆಂಗಳೂರು: ಕರೋನಾ ವೈರಸ್ ಹಿನ್ನೆಲೆಯಲ್ಲಿ ಕರ್ನಾಟಕ ಲಾಕ್ ಡೌನ್ ಘೋಷಣೆಯಾಗಿದೆ. ಹೀಗಿದ್ರೂ ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಯಲ್ಲಿ ಜನರ ಓಡಾಟವಿದೆ. ಜನಸಂದಣಿ ಕಂಡು ಬಂದಿದೆ. ಅಗತ್ಯವಿಲ್ಲದೆ ಹೊರ ಬಂದ್ರೆ, ಪೊಲೀಸ್ರು ತೆಗೆದುಕೊಳ್ಳುವ ಕ್ರಮಕ್ಕೆ ನಮ್ಮನ್ನ ದೂರಬೇಡಿ ಎಂದು ಸಿಎಂ ಬಿಎಸ್ವೈ ಹೇಳಿದ್ದಾರೆ.

ಅಗತ್ಯ ವಸ್ತುಗಳು ಕೊಳ್ಳಲು ಹಾಗೂ ಅತೀ ಅಗತ್ಯವಾದ ಸಂದರ್ಭದಲ್ಲಿ ಹೊರ ಬರಬೇಕು. ಉದ್ದೇಶವಿಲ್ಲದೆ ಸಾರ್ವಜನಿಕರು ಓಡಾಡಿದ್ರೆ ಪೊಲೀಸ್ರು ಕ್ರಮ ತೆಗೆದುಕೊಳ್ತಾರೆ. ಆಮೇಲೆ ಇದಕ್ಕೆ ಸರ್ಕಾರವನ್ನ ದೂರಬೇಡಿ ಎಂದಿದ್ದಾರೆ.

ನಮ್ಮ ಜವಾಬ್ದಾರಿ ಅರಿಯಬೇಕಿದೆ

ಸಾರ್ವಜನಿಕರು ಸೂಕ್ಷ್ಮತೆಯನ್ನ ಅರ್ಥ ಮಾಡಿಕೊಳ್ಳಬೇಕು. ಮನೆಯಲ್ಲಿಯೇ ಇರಿ. ಯಾರೂ ಹೊರಗೆ ಬರಬೇಡಿ. ಹೊರಗೆ ಬರದೆ ಎಚ್ಚರಿಕೆ ವಹಿಸೋದು ಮರೆಯಬೇಡಿ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!