ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ, ಸದನದಲ್ಲಿ ವಿಪಕ್ಷದವರು ಕಾಲಹರಣ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಕಿಡಿ ಕಾರಿದ್ದಾರೆ. ಸಿಡಿ ವಿಚಾರ ಬಯಲಾಗ್ತಿದ್ದಂತೆ ರಾಜೀನಾಮೆ ಪಡೆಯಲಾಗಿದೆ. ಎಸ್ಐಟಿ ತನಿಖೆ ನಡೆಯುತ್ತಿದೆ. ಯುವತಿ ಬಂದು ಸ್ಪಷ್ಟವಾಗಿ ದೂರು ನೀಡಿದ್ರೆ ಎಲ್ಲವೂ ಅಂತ್ಯವಾಗುತ್ತೆ. ಇದನ್ನೆ ವಿಪಕ್ಷದವರು ಮುಂದಿಟ್ಟುಕೊಂಡು ಕಾಲಹರಣ ಮಾಡ್ತಿದ್ದಾರೆ ಎಂದರು.
ಈಗಾಗ್ಲೇ ಈ ಪ್ರಕರಣ ತನಿಖೆಯಲ್ಲಿದೆ. ಹೀಗಿದ್ದರೂ ಸದನದಲ್ಲಿ ವಿಪಕ್ಷದವರು ಕುಂಟು ನೆಪ ಇಟ್ಟುಕೊಂಡು ಧರಣಿ ಮಾಡುತ್ತಿದ್ದಾರೆ. ಯಾಕಂದ್ರೆ, ಅವರ ಬಳಿ ಚರ್ಚಿಸಲು ಯಾವುದೇ ವಿಷಯ ಇಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.