ಸಂಸದೆಗೆ ಶಿವಸೇನೆ ಸಂಸದನಿಂದ ಆ್ಯಸಿಡ್ ಬೆದರಿಕೆ

284

ಪ್ರಜಾಸ್ತ್ರ ಸುದ್ದಿ

ಮುಂಬೈ: ಶಿವಸೇನೆ ಸಂಸದ ಅರವಿಂದ ಸಾವಂತ ವಿರುದ್ಧ ಸಂಸದೆ ನವನೀತ ಕೌರ್ ಆ್ಯಸಿಡ್ ದಾಳಿ ಮಾಡುವ ಬೆದರಿಕೆ ಕರೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ದೇ, ತಮ್ಗೆ ಬೆದರಿಕೆ ಪತ್ರಗಳು ಸಹ ಬಂದಿದ್ದು, ಈ ಬಗ್ಗೆ ಪೊಲೀಸರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದಿದ್ದಾರೆ.

ಮಹಾರಾಷ್ಟ್ರ ಸರ್ಕಾರದ ಗೃಹ ಸಚಿವರ ವಿರುದ್ಧ 100 ಕೋಟಿ ರೂಪಾಯಿ ಡೀಲ್ ಆರೋಪದಲ್ಲಿ ಸಿಲುಕಿಕೊಂಡಿದ್ದಾರೆ. ಈ ವಿಚಾರವನ್ನ ಸಂಸದೆ ನವನೀತ ಲೋಕಸಭೆಯಲ್ಲಿ ಪ್ರಶ್ನಿಸಿದ್ದರು. ಹೀಗಾಗಿ ತಮ್ಗೆ ಬೆದರಿಕೆ ಕರೆ ಬಂದಿದೆ ಎಂದಿದ್ದಾರೆ. ಸಂಸದೆಯ ಆರೋಪವನ್ನ ತಳ್ಳಿ ಹಾಕಿರುವ ಸಂಸದ ಸಾವಂತ, ಯಾರಾದರೂ ದೈಹಿಕ ಹಲ್ಲೆ ಮಾಡುವ ಬಗ್ಗೆ ಬೆದರಿಕೆ ಹಾಕಿದ್ದಾರೆ. ಸಂಸದೆ ಬೆಂಬಲಕ್ಕೆ ನಾನು ನಿಂತುಕೊಳ್ಳುತ್ತೇನೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!