ಪ್ರಜಾಸ್ತ್ರ ಸುದ್ದಿ
ನಾಸಿಕ್: ಶಿವಸೇನೆ ಇಲ್ಲದೆ ಹೋಗಿದ್ದರೆ ಬಾಲರಾಮನ ಪ್ರಾಣಪ್ರತಿಷ್ಠಾಪನೆ ಆಗುತ್ತಿರಲಿಲ್ಲವೆಂದು ಉದ್ಧವ್ ಠಾಕ್ರೆ ಬಣದ ಶಿವಸೇನೆಯ ನಾಯಕ ಸಂಜಯ್ ರಾವತ್ ಹೇಳಿದ್ದಾರೆ. ರಾಮನೊಂದಿಗೆ ಶಿವಸೇನಾ ಸಂಬಂಧ ಭಾವನಾತ್ಮಕವಾದದ್ದು, ಯಾವುದೇ ವ್ಯಕ್ತಿ, ಪಕ್ಷಕ್ಕೆ ಸಂಬಂಧಿಸಿದ್ದಲ್ಲ ಎಂದಿದ್ದಾರೆ.
ಶಿವಸೇನಾ ಹುಲಿಗಳು ತೋರಿಸಿದ ಧೈರ್ಯದಿಂದ ಪ್ರಧಾನಿ ಮೋದಿಯವರು ರಾಮನ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದಾರೆ. ರಾಮನೊಂದಿಗೆ ಹಳೆಯ ಸಂಬಂಧ ಏನಾದರೂ ಇದ್ದರೆ ಅದು ಶಿವಸೇನೆಯೊಂದಿಗೆ ಅಂತಾ ಹೇಳಿದರು.
ರಾಮ ಮಂದಿರ ಚಳವಳಿಯಲ್ಲಿ ಶಿವಸೇನೆಯ ಪಾತ್ರ ಏನು ಎಂದು ಬಿಜೆಪಿ ಪ್ರಶ್ನೆ ಮಾಡಿತ್ತು. ಇದಕ್ಕೆ ಉತ್ತರವೆಂಬಂತೆ ಸಂಜಯ್ ರಾವತ್ ಈ ರೀತಿ ಹೇಳಿದ್ದಾರೆ.