ನವದೆಹಲಿ: 11 ವರ್ಷಗಳ ಹಿಂದೆ ಅಂದ್ರೆ, ನವೆಂಬರ್ 28, 2008ರಂದು ಮುಂಬೈನಲ್ಲಿ ನಡೆದ ಉಗ್ರ ದಾಳಿಯ ಕರಾಳ ನೆನಪು ಇನ್ನು ಮಾಸಿಲ್ಲ. ಅಂದು 9 ಉಗ್ರರನ್ನ ಹತ್ಯೆ ಮಾಡಲಾಗಿತ್ತು. ಜೀವಂತವಾಗಿ ಸಿಕ್ಕವನು ಅಜ್ಮಲ್ ಸಕಬ್. ಮುಂದೆ ಈತನನ್ನ ಗಲ್ಲಿಗೇರಿಸಲಾಯ್ತು.
ಅಮಾಯಕರ ರಕ್ತ ಹರಿಸಿದ ಪಾಪಿ ಅಜ್ಮಲ್ ಕಸಬ್ ನನ್ನ ಹಿಂದೂನನ್ನಾಗಿ ಮಾಡುವ ಪ್ಲಾನ್ ಮಾಡಲಾಗಿತ್ತು ಅನ್ನೋ ಸ್ಫೋಟಕ ಮಾಹಿತಿ ಹೊರ ಬಂದಿದೆ. ಈ ಬಗ್ಗೆ ಮುಂಬೈ ಮಾಜಿ ಪೊಲೀಸ್ ಕಮಿಷನರ್ ರಾಕೇಶ ಮಾರಿಯಾ ಬರೆದ ಪುಸ್ತಕದಲ್ಲಿ ಬಹಿರಂಗಗೊಂಡಿದೆ. ‘ಲೆಟ್ ಮಿ ಸೇ ಇಟ್ ನಾವ್’ ಅನ್ನೋ ಪುಸ್ತಕದಲ್ಲಿ ಈ ವಿಚಾರವನ್ನ ಪ್ರಸ್ತಾಪ ಮಾಡಿದ್ದಾರೆ.
ಸಾಮಾನ್ಯವಾಗಿ ಹಿಂದೂಗಳು ಕೈಗೆ ಕೆಂಪುದಾರವನ್ನ ಕಟ್ಟಿಕೊಳ್ತಾರೆ. ಅದೇ ರೀತಿ ಕಸಬ್ ಕೈಯಲ್ಲ ಕೆಂಪುದಾರವಿತ್ತು. ಇದನ್ನ ನೋಡಿ ಜನರು ಆತ ಹಿಂದೂ ಎಂದು ತಿಳಿದುಕೊಳ್ತಾರೆ ಅನ್ನೋದು ಉಗ್ರ ಸಂಘಟನೆ ಲೆಕ್ಕಾಚಾರವಾಗಿತ್ತು. ಅಲ್ದೇ, 2008ರ ದಾಳಿಯನ್ನ ಹಿಂದೂಗಳ ಕೃತ್ಯವೆಂದು ಬಣ್ಣಿಸುವ ಪ್ಲಾನ್ ನಡೆದಿತ್ತು. ಆತನಿಗೆ ಸಮೀರ ಚೌಧರಿ ಅನ್ನೋ ಹೆಸರು ನೀಡುವ ಪ್ಲಾನ್ ಮಾಡಲಾಗಿತ್ತು ಅನ್ನೋ ಭಯಾನಕ ಸತ್ಯವನ್ನ ಹೊರ ಹಾಕಿದ್ದಾರೆ. ಪುಣ್ಯಕ್ಕೆ ಅದು ಹಾಗಾಗಲಿಲ್ಲವೆಂದು ಪುಸ್ತಕದಲ್ಲಿ ಬರೆದಿದ್ದು, ಈ ವಿಚಾರ ಇದೀಗ ಬಾರಿ ಚರ್ಚೆಯಾಗ್ತಿದೆ.