ಚಂದನವನದ ಹ್ಯಾಂಡ್ಸಮ್ ಹೀರೋ ರಮೇಶ ಅರವಿಂದ ಅವರ 101ನೇ ಚಿತ್ರ ಶಿವಾಜಿ ಸುರತ್ಕಲ್ ಭಾರೀ ಕುತೂಹಲ ಮೂಡಿಸಿದೆ. ಈಗಾಗ್ಲೇ ಟೀಸರ್ ಹಾಗೂ ಟ್ರೇಲರ್ ಭಾರೀ ಕಮಾಲ್ ಮಾಡಿದ್ದು, ಸಿನಿ ಪ್ರೇಕ್ಷಕರಿಗೆ ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದೆ.
ಫೆಬ್ರವರಿ 21 ಮಹಾಶಿವರಾತ್ರಿಯಂದು ಶಿವಾಜಿ ಸುರತ್ಕಲ್ ಮೂವಿ ರಿಲೀಸ್ ಆಗ್ತಿದೆ. ಪತ್ತೆದಾರಿ ಕಥೆಯನ್ನೊಳಗೊಂಡ ಚಿತ್ರವನ್ನ ಆಕಾಶ ಶ್ರೀವತ್ಸ ನಿರ್ದೇಶನ ಮಾಡಿದ್ದಾರೆ. ನಟ ರಮೇಶ ಅರವಿಂದ, ಡಿಟೆಕ್ಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಧಿಕಾ ನಾರಾಯಣ ಹಾಗೂ ಆರೋಹಿ ಅನ್ನೋ ಇಬ್ಬರು ನಟಿಯರು ಸಾಥ್ ನೀಡಿದ್ದಾರೆ. ಸಸ್ಪೆನ್ಸ್, ಥ್ರಿಲ್ಲರ್ ಮೂವಿ ನೋಡುಗರಿಗೆ ಖಂಡಿತ ಇಷ್ಟವಾಗಲಿದೆ.
ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಶಿವಾಜಿ ಸುರತ್ಕಲ್ ಮೂವಿ ನಿರ್ಮಾಣವಾಗಿದೆ. ರೇಖಾ ಕೆ.ಎನ್ ಹಾಗೂ ಅನೂಪಗೌಡ ನಿರ್ಮಾಪಕರಾಗಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಗುರುಪ್ರಸಾದ ಎಂ.ಜಿ ಕ್ಯಾಮೆರಾ ವರ್ಕ್ ಈ ಚಿತ್ರಕ್ಕಿದೆ. ಈಗಾಗ್ಲೇ ಭರ್ಜರಿ ಸೌಂಡ್ ಮಾಡ್ತಿರುವ ಮೂವಿ ಫೆಬ್ರವರಿ 21ಕ್ಕೆ ಪ್ರೇಕ್ಷಕರ ಮುಂದೆ ಬರ್ತಿದೆ.