ಪ್ರಜಾಸ್ತ್ರ ಸುದ್ದಿ
ಶಿವಮೊಗ್ಗ: ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ಕಾಂಗ್ರೆಸ್ ಏಜೆಂಟ್, ಕಾಂಗ್ರೆಸ್ ದಾಸ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ನವರ ಜೊತೆ ಸೇರಿ ಕೆಂಪಣ್ಣ, ಸ್ವಾಮೀಜಿ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ನಿಮ್ಮ ಬಳಿ ದಾಖಲೆ ಇದ್ದರೆ ಕೊಡಿ ಎಂದರು.
ಕಮಿಷನ್ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಶೇಕಡ 10, 20, 40 ಎಂದು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಸಂತೋಷ್ ಸತ್ತ. ಅದಕ್ಕೆ ಯಾರು ಕಾರಣ ಅನ್ನೋ ತನಿಖೆ ನಡೆಯುತ್ತಿದೆ. ಸತ್ಯ ಹೊರಗೆ ಬರಲಿ. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರಗೆ ಉದ್ಯೋಗ ಇಲ್ಲ. ಮುಸ್ಲಂನಾರನ್ನು ತೃಪ್ತಿಪಡಿಸೋದು, ಇಲ್ಲ ಕಮಿಷನ್ ಬಗ್ಗೆ ಮಾತನಾಡೋದು ಎಂದು ಟೀಕಿಸಿದರು.