ಪ್ರಜಾಸ್ತ್ರ ಸುದ್ದಿ
ಶಿವಮೊಗ್ಗ: ಮಠದ ವಸತಿ ಶಾಲೆಯಲ್ಲಿನ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣದಲ್ಲಿ, ಪೋಕ್ಸೋ ಕಾಯ್ದೆ ಅಡಿ ಬಂಧನಕ್ಕೆ ಒಳಗಾಗಿರುವ ಮುರುಘಾ ಮಠದ ಸ್ವಾಮೀಜಿ ಬಗ್ಗೆ ಮಾತನಾಡಿದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಶಿವಮೂರ್ತಿ ಶರಣರ ಪ್ರಕರಣದ ಬಗ್ಗೆ ಮಾತನಾಡಲು ವಾಕರಿಕೆ ಬರುತ್ತಿದೆ. ಅದರ ಬಗ್ಗೆ ನನಗೆ ಮಾತನಾಡಲು ಮನಸ್ಸಿಲ್ಲ ಎಂದಿದ್ದಾರೆ.
ಸಾಧು ಸಂತರು, ಮಠದ ಬಗ್ಗೆ ನನಗೆ ಗೌರವ ಇದೆ. ಮುಂದೆಯೂ ಇರುತ್ತೆ. ಈ ಪ್ರಕರಣ ಕೇಳಿ ಬಂದಾಗಿನಿಂದಲೂ ಇದು ಸುಳ್ಳಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಂಡಿದ್ದೇನೆ. ಈಗ ಪ್ರಕರಣ ನ್ಯಾಯಾಲಯದಲ್ಲಿದೆ. ತನಿಖೆಯಾಗಲಿ ತೀರ್ಪು ಬರಲಿ ಆಮೇಲೆ ಪ್ರತಿಕ್ರಿಯಿಸುತ್ತೇನೆ ಎಂದರು.