ಪ್ರಜಾಸ್ತ್ರ ಕ್ರೀಡಾ ಸುದ್ದಿ
ಏಷ್ಯ ಕಪ್ ಟೂರ್ನಿ ಶುರುವಾಗಿದ್ದು, ಪಂದ್ಯಗಳಿಗೆ ಮಳೆಯ ಕಾಟ ಶುರುವಾಗಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಕ್ರಿಕೆಟ್ ಟೂರ್ನಿ ನಡೆಯುವುದು ತುಂಬಾ ಕಡಿಮೆ. ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಎಲ್ಲೆಡೆ ಮಳೆಯಾಗುವುದು ಸಾಮಾನ್ಯ. ಪಾಕಿಸ್ತಾನ, ಶ್ರೀಲಂಕಾದಲ್ಲಿ ನಡೆಯುತ್ತಿರುವ ಪಂದ್ಯಗಳಿಗೆ ಮಳೆರಾಯ ಅಡ್ಡಿಯಾಗಿದ್ದಾನೆ.
ಭಾರತ ಹಾಗೂ ಪಾಕ್ ನಡುವಿನ ಹಣಾಹಣಿ ನೋಡಬೇಕು ಎಂದುಕೊಂಡಿದ್ದ ಕ್ರಿಕೆಟ್ ಪ್ರೇಮಿಗಳಿಗೆ ಮಳೆಯಿಂದ ಪಂದ್ಯ ರದ್ದಾಗಿ ನಿರಾಸೆಯಾಗಿದೆ. ಇಂದು ನೇಪಾಳ ವಿರುದ್ಧ ಭಾರತ ಕಣಕ್ಕೆ ಇಳಿಯಲಿದೆ. ಆದರೆ, ಇಂದೂ ಸಹ ಮಳೆರಾಯನ ಆತಂಕ ಮೂಡಿದೆ.
ಶ್ರೀಲಂಕಾದ ಕೊಲಂಬೊದಲ್ಲಿ ನಡೆಯುವ ಪಂದ್ಯಗಳನ್ನು ಸ್ಥಳಾಂತರ ಮಾಡುವುದಕ್ಕೆ ಎಸಿಸಿ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಶುಷ್ಕ ಪ್ರದೇಶವಾದ ಡಂಬುಲ್ಲಾದಲ್ಲಿ ಪಂದ್ಯಗಳನ್ನು ನಡೆಸಲು ಪ್ಲಾನ್ ನಡೆದಿದೆಯಂತೆ. ಇಂದಿನ ಪಂದ್ಯ ಕೊಲಂಬೊದಲ್ಲಿಯೇ ಇದ್ದು ನಡೆಯುತ್ತಾ, ಮಳೆಗೆ ಬಲಿಯಾಗುತ್ತಾ ಕಾದು ನೋಡಬೇಕು.