ತಿರುವನಂತಪುರ: ಕೇರಳ ವಿಧಾನಸಭೆಯಲ್ಲಿ ಭರ್ಜರಿ ಹೈಡ್ರಾಮಾ ನಡೆದಿದೆ. ಇಂದು ಬೆಳಗ್ಗೆ ಬಜೆಟ್ ಅಧಿವೇಶನಕ್ಕೂ ಮೊದ್ಲು ಸಂಪ್ರದಾಯದಂತೆ ಸರ್ಕಾರದ ಯೋಜನೆಗಳ ಕುರಿತು ರಾಜ್ಯಪಾಲ ಆರಿಫ ಮೊಹಮ್ಮದ ಖಾನ ಭಾಷಣ ಮಾಡಲು ಆಗಿಮಿಸಿದ ವೇಳೆ ಗೋ ಬ್ಯಾಕ್ ಘೋಷಣೆ ಕೂಗಲಾಗಿದೆ.
ಸದನದ ಬಾವಿಗೆ ಬರ್ತಿದ್ದಂತೆ ವಿರೋಧ ಪಕ್ಷದ ನಾಯಕರು ಗೋ ಬ್ಯಾಕ್ ಗರ್ವನರ್ ಗೋ ಬ್ಯಾಕ್ ಗರ್ವನರ್ ಎಂದು ಘೋಷಣೆ ಕೂಗಿದ್ದಾರೆ. ಸಿಎಂ ಪಿಣರಾಯಿ ವಿಜಯನ್ ಹಾಗೂ ಸ್ಪೀಕರ್ ಪಿ ರಾಮಕೃಷ್ಣನ್ ಅವರ ಜೊತೆ ಬಂದಿದ್ರು. ಈ ವೇಳೆ ಹೈಡ್ರಾಮಾ ನಡೆದಿದೆ. ಕೇರಳ ವಿಧಾನಸಭೆಯಲ್ಲಿ ಗರ್ವನರ್ ವಿರುದ್ಧ ಧಿಕ್ಕಾರ ಕೂಗಿರುವುದು ಮೊದಲ ಬಾರಿಗೆ ದಾಖಲಾಗಿದೆ.
ಪೌರತ್ವ ಕಾಯ್ದೆ ತಿದ್ದುಪಡಿ ವಿಚಾರವಾಗಿ ವಿಧಾನಸಭೆಗೆ ವಿರುದ್ಧವಾಗಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಾಗಿ ರಾಜ್ಯಪಾಲರನ್ನ ವಾಪಸ್ ಕರೆಸಿಕೊಳ್ಳಬೇಕೆಂದು ಒತ್ತಾಯಿಸಿ ವಿರೋಧ ಪಕ್ಷದ ಸದಸ್ಯರು ರಾಷ್ಟ್ರಪತಿಗಳಿಗೆ ನಿರ್ಣಯ ಹೊರಡಿಸಿದ್ರು.