Search

ಆಡಿಯೋ ಪ್ರಕರಣ: ಸಿಎಂ, ಅನರ್ಹರಿಗೆ ಸಂಕಷ್ಟ!

346

ನವದೆಹಲಿ: ಬಿಜೆಪಿ ಸರ್ಕಾರ ರಚನೆಗೆ ಅನರ್ಹ ಶಾಸಕರು ಕಾರಣವೆಂದು ಸಿಎಂ ಹೇಳಿರುವ ಆಡಿಯೋವನ್ನ ಸುಪ್ರೀಂ ಕೋರ್ಟ್ ಗಮನಕ್ಕೆ ಕಾಂಗ್ರೆಸ್ ತಂದಿದೆ. ಅದರ ವಿಚಾರಣೆಗೆ ನ್ಯಾಯಮೂರ್ತಿ ರಮಣ ನೇತೃತ್ವದ ಟೀಂ ಒಪ್ಪಿಕೊಂಡಿದ್ದು, ವಿಚಾರಣೆ ನಡೆಸಿದೆ. ಇದ್ರಿಂದಾಗಿ ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗೂ ಅನರ್ಹ ಶಾಸಕರಿಗೆ ದೊಡ್ಡ ಸಂಕಷ್ಟ ಎದುರಾಗಿದೆ.

ಇಂದು ಅನರ್ಹ ಶಾಸಕರ ಕುರಿತಾದ ತೀರ್ಪು ಬರ್ತಿದೆ ಅನ್ನೋ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ನೀಡಲಾಗಿದೆ. ಇದ್ರಿಂದಾಗಿ ಶುಕ್ರವಾರ ತೀರ್ಪು ಪ್ರಕಟವಾಗುವ ಸಾಧ್ಯತೆಯಿದೆ ಅಂತಾ ಹೇಳಲಾಗ್ತಿದೆ. ಇದರ ನಡುವೆ ಯಾವೆಲ್ಲ ಬೆಳವಣಿಗೆ ನಡೆಯಬಹುದು ಅನ್ನೋ ಕುತೂಹಲ ಮೂಡಿದ್ದು, ಸಿಎಂ ಬಿಎಸ್ವೈ ಹಾಗೂ ಅನರ್ಹ ಶಾಸಕರಿಗೆ ಆಡಿಯೋ ಪ್ರಕರಣ ಬಿಸಿ ತುಪ್ಪವಾಗಿ ಪರಿಣಮಿಸಿದೆ.




Leave a Reply

Your email address will not be published. Required fields are marked *

error: Content is protected !!