ಮುಂಬೈ: ಫಲಿತಾಂಶ ಬಂದು ತಿಂಗಳು ಆಗ್ತಾ ಬಂದ್ರೂ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಕಸರತ್ತು ಇನ್ನು ಬಗೆಹರಿದಿಲ್ಲ. ಇದ್ರಿಂದಾಗಿ ಶಿವಸೇನೆ, ಆರ್ ಎಸ್ಎಸ್ಎಸ್ ಮುಖಂಡ ಮೋಹನ ಭಾಗವತ್ ಗೆ ಪತ್ರ ಬರೆದಿದೆ. ಸರ್ಕಾರ ರಚನೆಯ ಸಂಬಂಧ ಮಧ್ಯವಸ್ಥಿಕೆ ವಹಿಸಲು ಮನವಿ ಸಲ್ಲಿಸಿದೆ.
ಮಹಾರಾಷ್ಟ್ರದಲ್ಲಿ 50-50 ಸರ್ಕಾರ ರಚನೆಗೆ ಶಿವಸೇನೆ ಪಟ್ಟು ಹಿಡಿದಿದೆ. ಬಿಜೆಪಿಯ ಅರ್ಧದಷ್ಟು ಸೀಟು ಸಹ ಗೆದ್ದಿಲ್ಲ. ಅವರಿಗೆ ಸಿಎಂ ಸ್ಥಾನ ಕೊಡುವುದು ಹೇಗ ಅಂತಾ ಪ್ರಶ್ನೆ ಮಾಡಿದ್ದಾರೆ. ಫಲಿತಾಂಶ ಬಂದು ತಿಂಗಳು ಆಗ್ತಾ ಬರ್ತಿದೆ. ಇಷ್ಟಿದ್ರೂ ಗೊಂದಲು ಬಗೆಹರಿದಿಲ್ಲ. ಇದ್ರಿಂದಾಗಿ ಆರ್ ಎಸ್ಎಸ್ಎಸ್ ಮಧ್ಯವಸ್ಥಿಕೆ ವಹಿಸುವಂತೆ ಶಿವಸೇನೆ ಕೇಳ್ತಿದೆ.
ಈ ಪತ್ರಕ್ಕೆ ಸಂಬಂಧಿಸಿದಂತೆ ದೇವೇಂದ್ರ ಫಡ್ನಾವಿಸ್, ಅಮಿತ ಶಾ ಸೇರಿದಂತೆ ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಆಗುವುದು ಯಾವಾಗ ಅನ್ನೋ ಪ್ರಶ್ನೆ ಮೂಡಿದೆ.