ಕಿಮ್ಸ್ ಭೂಲೋಕದ ನರಕದ ಬ್ರ್ಯಾಂಚ್.. ಆರೋಗ್ಯ ಸಚಿವರೆ ಇಲ್ನೋಡಿ

334

ಪ್ರಜಾಸ್ತ್ರ ಸುದ್ದಿ

ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿರುವ ಕಿಮ್ಸ್ ಆಸ್ಪತ್ರೆ ಸದಾ ಯಡವಟ್ಟುಗಳಿಂದ, ಕೆಟ್ಟ ವಿಚಾರಗಳಿಂದಲೇ ಸುದ್ದಿಯಲ್ಲಿರುತ್ತೆ. ಬಡ ಜನರಿಗೆ ಇಲ್ಲಿ ನರಕ ಕಾಣಿಸುತ್ತೆ. ಇಲ್ಲಿನ ಅಧಿಕಾರಿಗಳಿಗೆ ಯೋಜನೆಯ ಹೆಸರಿನಲ್ಲಿ ಸ್ವರ್ಗ ಕಾಣಿಸುತ್ತೆ.

ಆಕ್ಸಿಜನ್ ಅಳವಡಿಸಿದ ಮಗುವನ್ನ ಹೆತ್ತಪ್ಪ ಕೈಯಲ್ಲಿ ಹಿಡಿದುಕೊಂಡು ಹೋಗಿರುವ ದೃಶ್ಯ ಕಂಡು ಬಂದಿದೆ. ಸ್ಟ್ರಕ್ಚರ್ ಇಲ್ಲದೆ, ಆಕ್ಸಿಜನ್ ಅಳವಡಿಸುವ ಮಗುವನ್ನ ಎತ್ತಿಕೊಂಡು ಹೋಗ್ತಿರುವ ವಿಡಿಯೋ ವೈರಲ್ ಆಗಿದ್ದು, ಕಿಮ್ಸ್ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಮಗುವಿನ ಜೀವಕ್ಕೆ ಆನಾದ್ರೂ ಆದ್ರೆ ಯಾರು ಹೊಣೆ. ಬಡವರ ಜೀವಕಕ್ಕೆ ಬೆಲೆ ಇಲ್ವಾ? ಇದೇನಾ ವೈದ್ಯೋ ನಾರಾಯಣ ಹರಿ ಎನಿಸಿಕೊಳ್ಳುವವರು ಮಾಡುವ ಕೆಲಸ? ಇವರಿಗೆ ಎಷ್ಟು ಉಗಿದ್ರೂ ಅಷ್ಟೆ. ಅದನ್ನ ಒರಿಸಿಕೊಂಡು ತಮ್ಮ ಚಾಳಿ ಮುಂದುವರೆಸುತ್ತಾರೆ.

ಕಿಮ್ಸ್ ಆಸ್ಪತ್ರೆಯಲ್ಲಿ ಹೀಗೆ ಪದೆಪದೆ ಅಮಾನವೀಯ ಘಟನೆಗಳು ನಡೆಯುತ್ತಿದ್ರೂ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳದೆ ಇರೋದು ನಿಜಕ್ಕೂ ದುರಂತ. ಒಂದೊಳ್ಳೆ ಕೆಲಸದಿಂದ ಸುದ್ದಿಯಾಗುವ ಬದ್ಲು ಬರೀ ಯಡವಟ್ಟುಗಳಿಂದ ಸದ್ದು ಮಾಡುತ್ತೆ. ಇಲ್ಲಿಗೆ ಬರುವ ಬಡವರಿಗೆ ಒಳ್ಳೆಯ ಆರೋಗ್ಯ ಸೇವೆ ಸಿಗ್ತಿಲ್ಲ. ಆದ್ರೆ, ಇಲ್ಲಿ ಕೆಲಸ ಮಾಡುವವರ ಹೊಟ್ಟೆ ಮಾತ್ರ ಭರ್ಜರಿಯಾಗಿ ತುಂಬುತ್ತಿದೆ. ಆರೋಗ್ಯ ಸಚಿವ ಶ್ರೀರಾಮುಲು ಅವರು ಕೂಡಲೇ ಇತ್ತ ಗಮನ ಹರಿಸಿ ನಿರ್ಲಕ್ಷ್ಯ, ಬೇಜಾವಾಬ್ದಾರಿ ಸಿಬ್ಬಂದಿ ವಿರುದ್ಧ ಸೂಕ್ತ ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ.




Leave a Reply

Your email address will not be published. Required fields are marked *

error: Content is protected !!