ಪ್ರಜಾಸ್ತ್ರ ಸುದ್ದಿ
ರತಲಂ: ಜನಕ್ಕೆ ಎಷ್ಟು ಬುದ್ದಿ ಹೇಳಿದ್ರೂ ಅಷ್ಟೆ. ಯಾವನೋ ಬಂದು ನಾನು ದೇವಮಾನವ. ಕಲ್ಕಿ ಅವತಾರ ಅಂದ ತಕ್ಷಣ ನಂಬಿ ಜೀವನ, ಜೀವ ಸಹ ಕಳೆದುಕೊಳ್ತಾರೆ. ಕರೋನಾಗೆ ಔಷಧಿ ಕಂಡು ಹಿಡಿಯಲು ವಿಜ್ಞಾನಿಗಳು ಒದ್ದಾಡ್ತಿದ್ದಾರೆ. ಇಲ್ಲೊಬ್ಬ ನಾನು ಕಿಸ್ ಕೊಟ್ಟರೆ ಕರೋನಾ ಬರುವುದಿಲ್ಲವೆಂದು ನಂಬಿಸಿದ್ದ.
ಹೀಗೆ ಜನರಿಗೆ ನಂಬಿಸಿ ಕೈಗೆ ಮುತ್ತು ಕೊಡ್ತಿದ್ದ ಡೋಂಗಿ ಬಾಬಾನೇ ಕರೋನಾ ಸೋಂಕಿಗೆ ಬಲಿಯಾಗಿದ್ದಾನೆ. ಈ ವಿಚಿತ್ರ ಘಟನೆ ನಡೆದಿರುವುದು ಮಧ್ಯಪ್ರದೇಶದ ರತಲಂ ಜಿಲ್ಲೆಯಲ್ಲಿ. ಈ ನಕಲಿ ದೇವಮಾನವನಿಗೆ ಅಪಾರ ಭಕ್ತರಿದ್ರಂತೆ. ಇವರು ಅವನ ಮಾತು ನಂಬಿ, ಅವನಿಂದ ಕೈಗೆ ಮುತ್ತು ಕೊಡಿಸಿಕೊಂಡಿದ್ದಾರೆ. ಅಲ್ಲಿಗೆ ಸೋಂಕನ್ನ ಮೈಯೊಳಗೆ ಬಿಟ್ಟುಕೊಂಡಿದ್ದಾರೆ.
ಬಾಬಾನ ಮುತ್ತಿನ ಪ್ರಸಾದಿಂದ ನಾಲ್ವರು ಮಣ್ಣು ಸೇರಿದ್ದಾರೆ. 17 ಜನರ ಸ್ಥಿತಿ ಗಂಭೀರವಾಗಿದೆ. 85 ಜನರಲ್ಲಿ ಸೋಂಕು ಕಾಣಿಸಿಕೊಂಡಿ ಆಸ್ಪತ್ರೆ ಬೆಡ್ ಮೇಲೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಬಾ ಸೃಷ್ಟಿಸಿದ ಅವಾಂತರಕ್ಕೆ ಆರೋಗ್ಯ ಇಲಾಖೆ ಸುಸ್ತಾಗಿದೆ. ಈ ಜನಕ್ಕೆ ಯಾವುದು ನಂಬಬೇಕು. ಯಾವುದು ನಂಬಬಾರದು ಅನ್ನೋ ಸಣ್ಣ ವಿವೇಚನೆ ಇಲ್ಲದಕ್ಕೆ ಎಷ್ಟೊಂದು ಅನಾಹುತ ನಡೆದಿದೆ ಅನ್ನೋದಕ್ಕೆ ಉದಾಹರಣೆ ಇದೆ.