ನಿಷೇಧವಿದ್ರೂ ವಿಜಯಪುರದಲ್ಲಿ ಕಾರಹುಣ್ಣಿಮೆ ಆಚರಣೆ: ಲಾಠಿ ಚಾರ್ಜ್

398

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಕರೋನಾ ಲಾಕ್ ಡೌನ್ ನಿಂದಾಗಿ ಯಾವುದೇ ರೀತಿಯ ಹಬ್ಬಗಳನ್ನ ಸಾಮೂಹಿಕವಾಗಿ ಆಚರಣೆಗೆ ಅವಕಾಶವಿಲ್ಲ. ನೂರಾರು ಜನರು ಸೇರಿ ಹಬ್ಬಗಳನ್ನ, ಜಾತ್ರೆಗಳನ್ನ ಮಾಡುವಂತಿಲ್ಲ. ಆದ್ರೆ, ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿಯಲ್ಲಿ ಕಾರಹುಣ್ಣಿಮೆ ಕರಿ ಆಚರಿಸಲಾಗಿದೆ.

ಕಾರಹುಣ್ಣಿಮೆ ಅಂಗವಾಗಿ ಕಾಖಂಡಕಿಯಲ್ಲಿ ಕರಿ ಹರಿಯುವ ಕಾರ್ಯಕ್ರಮ ತುಂಬಾ ಪ್ರಸಿದ್ಧಿ. ಅಂದ್ರೆ, ಎತ್ತುಗಳನ್ನ ಓಡಿಸುವುದು. ಲಾಕ್ ಡೌನ್ ನಿಂದ ಈ ವರ್ಷ ರದ್ದು ಮಾಡಲಾಗಿತ್ತು. ಆದ್ರೆ, ನಿಯಮ ಉಲ್ಲಂಘಿಸಿ, ಎತ್ತುಗಳನ್ನ ಓಡಿಸಿದ್ದಾರೆ. ಈ ವೇಳೆ ಕುಡುಕರು ಪೊಲೀಸರ ಜೀಪಿನ ಮೇಲೆ ಕಲ್ಲ ಎಸೆದಿದ್ದಾರೆ.

ಘಟನೆ ವಿಕೋಪಕ್ಕೆ ಹೋಗ್ತಿದೆ ಎಂದು ತಿಳಿದ ಪೊಲೀಸ್ರು ಜನರನ್ನ ಚದುರಿಸಲು ಲಾಠಿ ಚಾರ್ಜ್ ನಡೆಸಿದ್ದಾರೆ. ಈ ಸಂಬಂಧ ಇಬ್ಬರನ್ನ ಬಂಧಿಸಲಾಗಿದೆ. ಈ ಕುರಿತು ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರ ದಾಖಲಾಗಿಲ್ಲ ಎನ್ನಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!