ಪ್ರಜಾಸ್ತ್ರ ಸುದ್ದಿ
ತುಮಕೂರು: ಸರ್ಕಾರಿ ಬಸ್ಸನ್ನೇ ಕಳ್ಳರು ಕದ್ದಿರುವ ಘಟನೆ ಗುಬ್ಬಿ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ. ಕೆಎಸ್ಆರ್ ಟಿಸಿಯ ಬಸ್ ನ್ನು ಸೋಮವಾರ ಕದ್ದು ಸುತ್ತಮುತ್ತ ಹಳ್ಳಿಯನ್ನು ಸುತ್ತಾಡಿದ್ದಾರೆ. ನಂತರ ಕುಣಿಗಲ್ ತಾಲೂಕಿನ ಗ್ರಾಮಗಳಲ್ಲಿಯೂ ಸುತ್ತಾಡಿದ್ದಾರೆ.
ಹೀಗೆ ಸುತ್ತಾಡಿದ ಕಳ್ಳರು ಕೊನೆಗೆ ಗುಬ್ಬಿ ತಾಲೂಕಿನ ಜನ್ನೇನಹಳ್ಳಿ ಬಳಿಯ ಬಸ್ ಬಿಟ್ಟು ಪರಾರಿಯಾಗಿದ್ದಾರೆ. ಬಸ್ ನಿಲ್ದಾಣದಲ್ಲಿ ಸಿಸಿಟಿವಿ ಇಲ್ಲದೆ ಇರುವುದೇ ಇಷ್ಟಕ್ಕೆಲ್ಲ ಕಾರಣವೆಂದು ಹೇಳಲಾಗುತ್ತಿದೆ.