ಬೈಕ್, ಸಾರಿಗೆ ಬಸ್ ಅಪಘಾತ: ತಂದೆ, ಮಗ ಸಾವು

288

ಪ್ರಜಾಸ್ತ್ರ ಸುದ್ದಿ

ಚನ್ನಪಟ್ಟಣ: ಸಾರಿಗೆ ಬಸ್ ಹಾಗೂ ಬೈಕ್ ನಡುವೆ ಸೋಮವಾರ ಸಂಭವಿಸಿದ ಅಪಘಾತದಲ್ಲಿ ತಂದೆ ಹಾಗೂ ಮಗ ಮೃತಪಟ್ಟ ಘಟನೆ ತಾಲೂಕಿನ ತಿಟ್ಟಮಾರನಹಳ್ಳಿ ಗ್ರಾಮದ ಕೆರೆ ಏರಿ ಮಾರ್ಗದಲ್ಲಿ ನಡೆದಿದೆ.

ಸಿದ್ದಯ್ಯ(58) ಮತ್ತು ಇವರ ಮಗ ಅರುಣ್(27) ಮೃತ ದುರ್ದೈವಿಗಳು. ಕೆಲಸದ ನಿಮಿತ್ತ ಬೈಕ್ ನಿಂದ ಚನ್ನಪಟ್ಟಣಕ್ಕೆ ಹೊರಟಿದ್ದರು. ಬೈಕ್ ಗೆ ಡಿಕ್ಕಿ ಹೊಡೆದ ಬಸ್ ಕೆರೆಯ ತಡೆಗೋಡೆಗೆ ಡಿಕ್ಕಿಯಾಗಿ ನಿಂತಿದೆ. ಹೀಗಾಗಿ ಬಸ್ ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!