ಸ್ಯಾಂಡಲ್ ವುಡ್ ಅಂಗಳದಲ್ಲಿ ಸಿನ್ಮಾಗಳಿಗಿಂತ ತನ್ನ ವಿಚಿತ್ರ ಮಾತು, ಭಾಷೆ, ಸ್ಟೈಲ್ ನಿಂದಲೇ ಸದ್ದು ಮಾಡಿದ ನಟ ಅಂದ್ರೆ ಹುಚ್ಚ ವೆಂಕಟ. ಮೊದ ಮೊದಲು ಆತನ ಮಾತು ಕರೆಕ್ಟ್ ಅಂತಿದ್ದವರಿಗೆ ನಿಧಾನವಾಗಿ ಅದು ತಲೆನೋವಾಯ್ತು. ಇದಕ್ಕೆ ಸ್ವಲ್ಪ ದಿನ ಬ್ರೇಕ್ ಬಿದ್ದಿತ್ತು ಅನ್ನುವಷ್ಟರಲ್ಲಿ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಕಾಣಿಸಿಕೊಂಡು ರಂಪಾಟ ಮಾಡಿದ.
ಇದೀಗ ದೊಡ್ಡಬಳ್ಳಾಪುರದಲ್ಲಿ ಕಾಲೇಜ್ ಹುಡ್ಗಿಗೆ ರೇಗಿಸಿದ್ದಾನೆ. ಬಸ್ ಗಾಗಿ ಕಾಯುತ್ತಾ ನಿಂತಿದ್ದ ಹುಡ್ಗಿ ಹತ್ತಿರ ಹೋಗಿ ಕಾಲೇಜಿಗೆ ಬಿಡ್ತೀನಿ ಬಾರೆ ಎಂದು ಕರೆದಿದ್ದಾನೆ. ಅಲ್ದೇ, ಆಕೆಯ ಹಿಂದೆಯೇ ಸುತ್ತಾಡಿದ್ದಾನೆ. ಇದನ್ನ ಕೆಲವರು ಮೊಬೈಲ್ ನಲ್ಲಿ ಶೂಟ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ಯಾರು ಯಾಕೆ ಇನ್ನು ಕ್ರಮ ತೆಗೆದುಕೊಳ್ತಿಲ್ವೋ ಗೊತ್ತಾಗ್ತಿಲ್ಲ.