ವಿದ್ಯಾರ್ಥಿಗಳಲ್ಲಿ ಆರೋಗ್ಯದ ಜಾಗೃತಿ

248

ಪ್ರಜಾಸ್ತ್ರ ಸುದ್ದಿ

ಯಡ್ರಾಮಿ: ತಾಲೂಕಿನ ಮಾಗಣಗೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಡಾ.ಎಂ.ಎಸ್ ಸ್ವಾಮಿನಾಥನ್ ಇಕೋ ಕ್ಲಬ್ ವತಿಯಿಂದ ಆರೋಗ್ಯವೆ ಭಾಗ್ಯ ಎನ್ನು ಕಾರ್ಯಕ್ರಮವನ್ನು ಇತ್ತೀಚೆಗೆ ನಡೆಸಲಾಯಿತು.

ವೈದ್ಯಾಧಿಕಾರಿ ಡಾ.ಜಗದೀಶ ಜಲದೆ, ಡಾ.ಶಿವಣ್ಣಗೌಡ ಪಾಟೀಲ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಸಾಂಕ್ರಾಮಿಕ ರೋಗ, ವೈಯಕ್ತಿಕ ಸ್ವಚ್ಛತೆ, ನಿತ್ಯ ಸೇವಿಸುವ ಆಹಾರ ಸೇರಿದಂತೆ ಹಲವು ವಿಚಾರಗಳ ಕುರಿತು ವಿದ್ಯಾರ್ಥಿಗಳಿಗೆ ತಿಳುವಳಿಕೆಯನ್ನು ಡಾ.ಜಗದೀಶ ಜಲದೆ ನೀಡಿದರು.

ಶಾಲೆಯ ವಿಜ್ಞಾನ ಶಿಕ್ಷಕ ಹಾಗೂ ಇಕೋ ಕ್ಲಬ್ ಮಾರ್ಗದರ್ಶಕರಾದ ಬಸವರಾಜ ಕುರನಳ್ಳಿ ಮಾತನಾಡಿದರು. 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳು ಸಕ್ಕರೆ ಕಾಯಿಲೆ ಹಾಗೂ ಹೃದಯ ರೋಗದ ಸಮಸ್ಯೆ ಕುರಿತು ಮಾತನಾಡಿದರು. ಶಾಲೆಯ ಪ್ರಭಾರಿ ಮುಖ್ಯಗುರುಗಳಾದ ಸಣ್ಣಮೈಲಾರಪ್ಪನವರು ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದರು.

ಈ ವೇಳೆ ಯಡ್ರಾಮಿ ತಾಲೂಕಿನ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಲವಂತ್ರಾಯಗೌಡ ಬಿರಾದಾರ, ಪ್ರೌಢಶಾಲೆಯ ಶಿಕ್ಷಕರು, ಸಿಬ್ಬಂದಿ, ಹಳೆಯ ವಿದ್ಯಾರ್ಥಿಗಳು, ಗ್ರಾಮಸ್ಥರು ಭಾಗವಹಿಸಿದ್ದರು. ವಿದ್ಯಾರ್ಥಿನಿಯರಾದ ಭಾಗ್ಯಶ್ರೀ, ಕೀರ್ತಿ ನಿರೂಪಿಸಿದರು, ರಾಧಿಕಾ ವಂದಿಸಿದರು.




Leave a Reply

Your email address will not be published. Required fields are marked *

error: Content is protected !!