ಚುನಾವಣೆ ಆಯೋಗ ಅನುಮತಿ ನೀಡಿದ್ರೆ ಸಾರಿಗೆ ನೌಕರ ಸಂಬಳ ಹೆಚ್ಚಿಗೆ

237

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯ ಸಾರಿಗೆ ನೌಕರರು 6ನೇ ವೇತನ ಆಯೋಗ ಬೇಡಿಕೆ ಈಡೇರಿಕೆಗಾಗಿ ಏಪ್ರಿಲ್ 7ರಿಂದ ಅನಿರ್ದಾಷ್ಟಾವಧಿ ಧರಣಿ ನಡೆಸಲು ಮುಂದಾಗಿದ್ದಾರೆ. ಇಂಥಾ ಸಂದರ್ಭದಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮಾತ್ನಾಡಿದ್ದು, ಚುನಾವಣೆ ಆಯೋಗ ಅನುಮತಿ ನೀಡಿದರೆ ಸಾರಿಗೆ ನೌಕರ ಸಂಬಳ ಹೆಚ್ಚಿಗೆ ಮಾಡಲಾಗುವುದು ಎಂದಿದ್ದಾರೆ.

ಕಳೆದ ಬಾರಿ ಇಟ್ಟಿದ್ದ 9 ಬೇಡಿಕೆಗಳಲ್ಲಿ 8 ಬೇಡಿಕೆ ಈಡೇರಿಸಿದ್ದೇವೆ. ಈ ಬಗ್ಗೆ ಹಣಕಾಸು ಇಲಾಖೆ ಜೊತೆ ಮಾತ್ನಾಡಿದ್ದೇವೆ. ಹೀಗಾಗಿ ಇಂಥಹ ಕಠಿಣ ಸಂದರ್ಭದಲ್ಲಿ ಮುಷ್ಕರ ಬೇಡ ಎಂದು ಸಾರಿಗೆ ನೌಕರರು ಹಾಗೂ ಮುಖಂಡರಿಗೆ ಮನವಿ ಮಾಡಲಾಗುವುದು. ಒಂದು ವೇಳೆ ಮುಷ್ಕರ ನಡೆಸಿದ್ರೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!