ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಜೂನ್ 7ರ ತನಕ ಲಾಕ್ ಡೌನ್ ಮಾಡಲಾಗಿದೆ. ಆದ್ರೆ, ಜೂನ್ 7ರ ನಂತರ ಲಾಕ್ ಡೌನ್ ಮುಂದುವರೆಸಲಾಗುತ್ತಾ ಇಲ್ವಾ ಅನ್ನೋ ಪ್ರಶ್ನೆ ಕಾಡುತ್ತಿದೆ. ಈ ಬಗ್ಗೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತ್ನಾಡಿದ್ದು, ಸೋಂಕು ಕಡಿಮೆಯಾಗದಿದ್ರೆ ಅನ್ ಲಾಕ್ ಮಾಡುವುದಿಲ್ಲವೆಂದು ಹೇಳಿದ್ದಾರೆ.
ರಾಜ್ಯದಲ್ಲಿ ಏಕಾಏಕಿ ಅನ್ ಲಾಕ್ ಮಾಡುವ ಬದಲು ಹಂತ ಹಂತವಾಗಿ ಅನ್ ಲಾಕ್ ಮಾಡುವುದು ಒಳ್ಳೆಯದು. ಅನ್ ಲಾಕ್ ಬಗ್ಗೆ ತಜ್ಞರ ಜೊತೆಗೆ ನಾಳೆ ಸಮಾಲೋಚನೆ ಮಾಡಲಾಗುತ್ತೆ. ಇದಾದ ಬಳಿಕ ತೀರ್ಮಾನ ತೆಗೆದುಕೊಳ್ಳಲಾಗುತ್ತೆ ಎಂದಿದ್ದಾರೆ.
ಇನ್ನು ಕೋವಿಡ್ ನಿಂದ ಮೃತಪಟ್ಟಿವರ ಕುಟುಂಬಕ್ಕೆ ಪರಿಹಾರ ನೀಡಲು ಸರ್ಕಾರ ಬದ್ಧವಾಗಿದೆ. ಇನ್ನು ಬ್ಲಾಕ್ ಫಂಗಸ್ ಮೆಡಿಷನ್ ಕೊರತೆ ಇದೆ. ವಾಕ್ಸಿನ್ ಬಗ್ಗೆ ಕೇಂದ್ರದ ಸರ್ಕಾರದ ಚರ್ಚೆ ನಡೆಸಲಾಗ್ತಿದೆ.