ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕರೋನಾ ಲಾಕ್ ಡೌನ್ ನಿಂದ ಜನರಿಗೆ ಉಸಿರು ಕಟ್ಟಿದಂತಾಗಿತ್ತು. ಕೆಲವೊಂದಿಷ್ಟಕ್ಕೆ ಸಡಿಲಿಕೆ ಕೊಟ್ಟರು ಕಾಲಾವಕಾಶ ನಿಗದಿ ಮಾಡಿದ್ದರಿಂದ ಸಮಸ್ಯೆ ತಪ್ಪಿರಲಿಲ್ಲ. ಆದ್ರೆ, ಇಂದಿನಿಂದ ಮುಂದಿನ 15 ದಿನಗಳ ಕಾಲ ಕರ್ನಾಟಕವನ್ನ ಸಂಪೂರ್ಣ ಅನ್ ಲಾಕ್ ಮಾಡಲಾಗಿದೆ. ಹೀಗಾಗಿ ಆರ್ಥಿಕ ಚಟುವಟಿಕೆಗಳು ಮರುಜೀವ ಬಂದಿದೆ.
ಚಿತ್ರಮಂದಿರ, ಪಬ್, ರಾಜಕೀಯ ಸಭೆ, ಸಮಾರಂಭಗಳನ್ನ ಹೊರತು ಪಡಿಸಿ ಉಳಿದೆಲ್ಲ ವ್ಯಾಪಾರ ವಹಿವಾಟುಗಳಿಗೆ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 5ರಿಂದ ರಾತ್ರಿ 9ಗಂಟೆಯ ತನಕ ವ್ಯಾಪಾರ ವಹಿವಾಟು ನಡೆಸಬಹುದು. ವಾರಂತ್ಯದ ಕರ್ಫ್ಯೂ ಸಹ ಇರುವುದಿಲ್ಲ. ಹೀಗಾಗಿ ಜನರ ಮುಖದಲ್ಲಿ ಒಂದಿಷ್ಟು ಮಂದಹಾಸ ಮೂಡಿದೆ.
ಮುಂದಿನ ದಿನಗಳಲ್ಲಿ ಕರೋನಾ ಸೋಂಕಿನ ಪ್ರಮಾಣ ಇನ್ನಷ್ಟು ಕಡಿಮೆಯಾಗಿ ಮೊದಲಿನಂತೆ ಜನಜೀವನ ಇರಬೇಕು ಅಂದ್ರೆ ಸಾರ್ವಜನಿಕರು ಸಹ ಮಾರ್ಗಸೂಚಿಗಳನ್ನ ಅನುಚರಿಸುವುದು ಒಳ್ಳೆಯದು.