ಪ್ರಜಾಸ್ತ್ರ ಸುದ್ದಿ
ಬಾದಾಮಿ: ನೀಲಗುಂದ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ಮ್ಯಾನೇರ್ ಗ್ರಾಹರಿಗೆ ಮೋಸ ಮಾಡಿರುವ ಪ್ರಕರಣ ಸಂಬಂಧ ಪ್ರತಿಭಟನೆ ನಡೆಸಿದ್ದಾರೆ. ಬ್ಯಾಂಕಿಗೆ ಕೀ ಹಾಕಿ ತಮಗೆ ನ್ಯಾಯ ಬೇಕು ಎಂದು ಪ್ರತಿಭಟನೆ ನಡೆಸಿದ ಘಟನೆ ಕುಳಗೇರಿ ಕ್ರಾಸ್ ನಲ್ಲಿ ನಡೆದಿದೆ.
ಘಟನೆ ಬಗ್ಗೆ ತಿಳಿದು ಬಾಗಲಕೋಟೆ ಸೀನಿಯರ್ ಮ್ಯಾನೇಜರ್ ರಾಜು.ಟಿ ಸ್ಥಳಕ್ಕೆ ಬಂದು ಗ್ರಾಹಕರೊಂದಿಗೆ ಮಾತಕತೆ ನಡೆಸಿದರೂ ಫಲ ನೀಡಿಲ್ಲ. ಅವರನ್ನು ಒಳಗೆ ಹಾಕಿ ಬೀಗ ಹಾಕಿದ್ದಾರೆ. ನಂತರ ಸ್ಥಳಕ್ಕೆ ಬಾದಾಮಿ ಕ್ರೈಂ ಪಿಎಸ್ಐ ವಿಠ್ಠಲ ನಾಯಕ ಬಂದು ಮಾತುಕತೆ ನಡೆಸಿದರು.
ಗ್ರಾಹಕರ ಖಾತೆಯಲ್ಲಿ ದೊಡ್ಡ ಮೊತ್ತದ ಸಾಲ ಏರಿಸಿ ಮ್ಯಾನೇಜರ್ ಪರಾರಿಯಾಗಿದ್ದಾನೆ. ಈ ಬಗ್ಗೆ ಲಿಖಿತ ಮನವಿ ಸಹ ಸಲ್ಲಿಸಲಾಗಿದೆ. ಆದರೂ ಆತನ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ನಮ್ಮ ಹಣ ನಮಗೆ ವಾಪಸ್ ಕೊಡಿ ಎಂದು ಪಟ್ಟು ಹಿಡಿದರು. ಇದರಲ್ಲಿ ಯಾರೆಲ್ಲ ಶಾಮೀಲಾಗಿದ್ದಾರೆ ಅವರೆಲ್ಲರ ಮೇಲೆ ಕೇಸ್ ದಾಖಲಿಸಬೇಕು ಎಂದರು. ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತಂದು ಗ್ರಾಹಕರ ಹಣ ವಾಪಸ್ ಕೊಡಲು ಮಾರ್ಚ್ 30ರ ತನಕ ಗಡವು ನೀಡಲಾಗಿದೆ.