ಮತ್ತೆ ನಾನೇ ಸಿಎಂ ಆಗ್ತೀನಿ: ಸಿದ್ದು

445
ಜಾಹೀರಾತು

ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ನಾನೇ ಸಿಎಂ ಆಗ್ತೀನಿ ಅಂತಾ ಹೇಳಿದ್ದಾರೆ. ಸ್ವಕ್ಷೇತ್ರ ಬಾದಾಮಿಯಲ್ಲಿ ಪ್ರವಾಹ ಪರಿಸ್ಥಿತಿ ವಿಕ್ಷಿಸಿದ ಬಳಿಕ ಸಂತ್ರಸ್ತರ ಜೊತೆ ಮಾತ್ನಾಡುವಾಗ ಈ ರೀತಿ ಹೇಳಿದ್ದಾರೆ.

ನೆರೆಯಿಂದ ಜೀವನವೇ ಸಾಕಾಗಿ ಹೋಗಿದೆ. ನಮ್ಮನ್ನು ಬೇರೆ ಕಡೆ ಸ್ಥಳಾಂತರಿಸಿ ಎಂದು ಅಂಗಲಾಚಿದ್ರು. 2009ರಲ್ಲಿಯೂ ಪ್ರವಾಹ ಆಗಿತ್ತು. ಈ ಬಾರಿ ವರ್ಷದಲ್ಲಿ ಎರಡು ಬಾರಿ ನೆರೆ ಬಂದಿದೆ. ಇದ್ರಿಂದಾಗಿ ಜೀವನ ನಡೆಸುವುದು ಕಷ್ಟವಾಗಿದೆ ಅಂತಾ ವಿಪಕ್ಷ ನಾಯಕನ ಮುಂದೆ ತಮ್ಮ ಗೋಳು ತೋಡಿಕೊಂಡ್ರು.

ವಿಧಾನಸಭೆಯಲ್ಲಿ ನಾನು 5 ಗಂಟೆಗಳ ಸುದೀರ್ಘ ಭಾಷಣ ಮಾಡಿದೆ. ಆದ್ರೆ, ಸರ್ಕಾರ ಕೇಳಿಸಿಕೊಳ್ತಿಲ್ಲ. ಸರ್ಕಾರಕ್ಕೆ ಎಷ್ಟು ಕಿವಿ ಹಿಂಡಿದ್ರೂ ಕೇಳಿಸಿಕೊಳ್ಳದೆ ಒಂದು ನಿಮಿಷದಲ್ಲಿ ಉತ್ತರ ಕೊಟ್ಟು ಸುಮ್ಮನಾಯ್ತು. ಮುಂದಿನ ಸಾರಿ ನಾನೇ ಮತ್ತೆ ಸಿಎಂ ಆಗ್ತೀನಿ. ಆಗ ನಿಮ್ಮ ಸಮಸ್ಯೆ ಬಗೆಹರಿಸುತ್ತೇನೆ ಎಂದು ಮಾಜಿ ಸಿಎಂ ಹೇಳುವ ಮೂಲಕ ಭರವಸೆ ನೀಡುದ್ರು.




Leave a Reply

Your email address will not be published. Required fields are marked *

error: Content is protected !!