ಮೂಗಿಗೆ ನಿಂಬೆರಸ ಬಿಟ್ಟುಕೊಂಡ ಶಿಕ್ಷಕ ಸಾವು

384

ಪ್ರಜಾಸ್ತ್ರ ಸುದ್ದಿ

ಸಿಂಧನೂರು: ಕೋವಿಡ್ ಸೋಂಕಿನಿಂದ ಹೆದರಿರುವ ಜನರು ಯಾರು ಏನು ಹೇಳಿದ್ರು ಕೇಳುವ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ಸಾವು ಸಹ ಎದುರಿಸುವಂತಾಗಿದೆ. ಸಿಂದನೂರು ನಗರದ ಶಿಕ್ಷಕ ಬಸವರಾಜ(43) ಎಂಬುವರು ಮೂಗಿಗೆ ನಿಂಬೆರಸ ಹಾಕಿಕೊಂಡ ಪರಿಣಾಮ, ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಸಿಕೊಂಡು ಪ್ರಾಣ ಕಳೆದುಕೊಂಡಿದ್ದಾರೆ.

ಬಸವರಾಜ ನಿಂಬೆರಸ ಮೂಗಿಗೆ ಬಿಟ್ಟುಕೊಂಡ ಬಳಿಕ ಎರಡು ಬಾರಿ ವಾಂತಿ ಆಗಿದೆ. ಬಳಿಕ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಕೆಲಸವಾಗಿದೆ. ಆದ್ರೆ, ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾರೆ. ಮೃತ ಬಸವರಾಜಗೆ ಯಾವುದೇ ಆರೋಗ್ಯ ಸಮಸ್ಯೆ ಇರ್ಲಿಲ್ಲವೆಂದು ಕುಟುಂಬಸ್ಥರು ಹೇಳ್ತಿದ್ದಾರೆ.

ಮೂಗಿಗೆ ನಿಂಬೆ ರಸ ಹಾಕಿಕೊಂಡರೆ, ಅದು ಧ್ವನಿಪೆಟ್ಟಿಗೆ ಕಡೆ ಜಾರಿದ್ರೆ ಉಸಿರಾಟದ ಸಮಸ್ಯೆಯಾಗುತ್ತೆ. ಇದರಿಂದ ಸಾವು ಸಹ ಸಂಭವಿಸುತ್ತೆ ಎಂದು ವೈದ್ಯರು ಹೇಳ್ತಿದ್ದಾರೆ. ಆದ್ರೆ, ಯಾರೋ ಒಬ್ಬರು ಮೂಗಿಗೆ ನಿಂಬೆರಸ ಹಾಕಿಕೊಂಡರೆ ಕರೋನಾ ಬರಲ್ಲ ಅಂದ್ರಂತೆ, ಜನರು ಮರುಳಾಗಿ ಬಿಡ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!