ಪ್ರಜಾಸ್ತ್ರ ಅಪರಾಧ ಸುದ್ದಿ
ಹಾಸನ: ಸಾಲ ಕೊಡುವುದಿಲ್ಲವೆಂದು ಹೇಳಿದ ಸ್ನೇಹಿತನನ್ನೇ ಕೊಲೆ ಮಾಡಿದ ಐವರು ಕಿರಾತಕರನ್ನ ಬಂಧಿಸಲಾಗಿದೆ. ಡಿಸೆಂಬರ್ 5, ಶನಿವಾರ ರಾತ್ರಿ ಸುಮಾರು 8.15ರ ಸುಮಾರಿಗೆ ಟೀ ಅಂಗಡಿ ಬಳಿ ಕುಳ್ತಿದ್ದ ರಘುಗೌಡ(25) ಎಂಬಾತನನ್ನ ಕೊಲೆ ಮಾಡಿ ಪರಾರಿಯಾಗಿದ್ರು.
ಇದೀಗ ಐವರನ್ನ ಬಂಧಿಸಲಾಗಿದೆ. ಭವಿತ(19), ತೇಜಸ(19), ನವೀನಕುಮಾರ(21), ಪುನೀತ(21) ಹಾಗೂ ವಿವೇಕ(24) ಎಂಬುವರನ್ನ ಬಂಧಿಸಲಾಗಿದೆ. ಕೊಲೆಯಾದ ರಘುಗೌಡ, ತೇಜಸನಿಂದ 1.50 ಲಕ್ಷ ರೂಪಾಯಿ ಸಾಲ ಮಾಡಿದ್ದ. ಅದರಲ್ಲಿ 50 ಸಾವಿರ ರೂಪಾಯಿ ಕೊಟ್ಟಿದ್ದ. ಉಳಿದಿದ್ದು ಕೊಡುವಂತೆ ಕೇಳಿದಾಗ ಆತ ಆಗಲ್ಲವೆಂದಿದ್ದಾನೆ.
ತೇಜಸ ಸಾಲ ವಾಪಸ್ ಮಾಡುವುದಕ್ಕೆ ಒತ್ತಾಯ ಮಾಡ್ತಿದ್ದ. ರಘುಗೌಡ ಕೊಡಲು ಆಗೋದಿಲ್ಲ. ಏನ್ ಮಾಡ್ತಿಯಾ ಮಾಡ್ಕೋ ಎಂದಿದ್ದಾನೆ. ಹೀಗಾಗಿ ಇವರ ನಡುವೆ ವೈಮನಸ್ಸು ಮೂಡಿದೆ. ಕಳೆದ ಡಿಸೆಂಬರ್ 5ರ ರಾತ್ರಿ 8.15ರ ಸುಮಾರಿಗೆ ಸಂಸ್ಕೃತ ಭವನದ ಎದುರಗಿನ ಟೀ ಅಂಗಡಿ ಮುಂದೆ ಕುಳ್ತಿದ್ದ ರಘುಗೌಡ ಮೇಲೆ ಎರಡು ಬೈಕ್ ಗಳಲ್ಲಿ ಬಂದ ಆರೋಪಿಗಳು ಕಣ್ಣಿಗೆ ಖಾರದ ಪುಡಿ ಎರಚಿ ಕೊಲೆ ಮಾಡಿ ಹೋಗಿದ್ರು. ಇದೀಗ ಅವರನ್ನ ಬಂಧಿಸಲಾಗಿದೆ.