ಅಣ್ಣನಿಂದಲೇ ತಮ್ಮನ ಕೊಲೆ

228

ಪ್ರಜಾಸ್ತ್ರ ಅಪರಾಧ ಸುದ್ದಿ

ಗಂಗಾವತಿ: ಅಣ್ಣನೇ ತಮ್ಮನನ್ನು ಕೊಲೆ ಮಾಡಿದ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಎಚ್.ಆರ್ ಎಸ್ ಕಾಲನಿಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಮೌಳ್ ಹುಸೇನ್ ಭಾರಿ(32) ಕೊಲೆಯಾದ ಯುವಕ ಎಂದು ತಿಳಿದು ಬಂದಿದೆ.

ಅಣ್ಣ ನೂರ್ ಅಹ್ಮದ್ ಕೊಲೆ ಮಾಡಿದ ಆರೋಪಿ. ಮಂಗಳವಾರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಗಂಗಾವತಿ ತಾಲೂಕಿನ ಕಿಲ್ಲಾ ಏರಿಯಾದಲ್ಲಿ ವಾಸವಾಗಿದ್ದರು. ಇತ್ತೀಚೆಗೆ ಎಚ್.ಆರ್ ಎಸ್ ಕಾಲನಿಯ ಅಂಖಡೇಶ್ವರ ದೇವಸ್ಥಾನದ ಹತ್ತಿರದ ಮನೆಯಲ್ಲಿ ಬಾಡಿಗೆಗೆ ಇದ್ದರು. ಕೌಟುಂಬಿಕ ಕಾರಣಕ್ಕೆ ಕೊಲೆ ನಡೆದಿದೆ ಎನ್ನಲಾಗುತ್ತಿದೆ. ನಿಖರ ಕಾರಣ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.




Leave a Reply

Your email address will not be published. Required fields are marked *

error: Content is protected !!