ಪ್ರಜಾಸ್ತ್ರ ಅಪರಾಧ ಸುದ್ದಿ
ಯಾದಗಿರಿ: ಒಂದೇ ಜಾತಿಯ ಜೋಡಿಯೊಂದು ಪ್ರೀತಿಸುತಿತ್ತು. ಈ ವಿಚಾರ ಮನೆಯವರಿಗೆ ಗೊತ್ತಾಗಿದೆ. ಹೀಗಾಗಿ ಹುಡುಗಿಯ ಸಂಬಂಧಿಕರು ಹುಡುಗನನ್ನ ಮಾತುಕತೆಗೆ ಕರೆದುಕೊಂಡು ಹೋಗಿದ್ದಾರೆ. ಸಂಬಂಧದ ಬಗ್ಗೆ ಮಾತ್ನಾಡಿಸುವುದಕ್ಕೆ ಕರೆದು ಹಲ್ಲೆ ಮಾಡಿ, ವಿಷ ಕುಡಿಸಿ ಹತ್ಯೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.
ಯಾದಗಿರಿ ಜಿಲ್ಲೆ ಶಹಪುರ ತಾಲೂಕಿನ ಸಾದ್ಯಾಪುರ ಗ್ರಾಮದ 22 ವರ್ಷದ ಸಂತೋಷ ಅನ್ನೋ ಹುಡುನ ಕೊಲೆಯಾಗಿದೆ ಎನ್ನಲಾಗ್ತಿದೆ. ಅದೆ ಗ್ರಾಮದ ಒಂದೇ ಜಾತಿಯ ಹುಡುಗಿಯನ್ನ ಪ್ರೀತಿಸಿದ್ದು ಈ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಅನ್ನೋ ಆರೋಪ ಕೇಳಿ ಬಂದಿದೆ.
ಸಂತೋಷ ಮೃತದೇಹ ಶಹಪುರ ನಗರದ ಆಶ್ರಯ ಕಾಲೋನಿ ಹತ್ತಿರದ ವಸತಿ ನಿಲಯದ ಬಳಿ ಪತ್ತೆಯಾಗಿದೆ. ಹೆತ್ತವರ, ಸಂಬಂಧಿಕರ ಆಕ್ರಂದನ ಹೇಳ ತೀರದಾಗಿದೆ. ಈ ಸಂಬಂಧ ಶಹಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.