ಅಂಬರೀಶ ಅಭಿಮಾನಿ ಬಳಗದಿಂದ ವಿಕಲಚೇತನರಿಗೆ ಸಹಾಯ

340

ಪಾಂಡವಪುರ: ಲಾಕ್‌ ಡೌನ್‌ ನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ತಾಲೂಕಿನ ಹಲವಾರು ಅಂಗವಿಕಲರಿಗೆ ಅಂಬರೀಶ ಅಭಿಮಾನಿಗಳ ಸಂಘದಿಂದ ಆಹಾರದ ಕಿಟ್ ನೀಡಲಾಯ್ತು.

ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಕಲಚೇತನರಿಗೆ ಆಹಾರದ ಕಿಟ್ ವಿತರಣೆ ಮಾಡಲಾಯ್ತು. ಈ ವೇಳೆ ಮಾತ್ನಾಡಿದ ಸಂಸದೆ ಸುಮಲತಾ ಅಂಬರೀಶ ಅವರು, ಲಾಕ್‌ ಡೌನ್‌ ನಿಂದ ಜನರು ತೀವ್ರ ಕಷ್ಟವನ್ನ ಎದುರಿಸುತ್ತಿದ್ದಾರೆ. ಅದರಲ್ಲೂ ಅಂಗವಿಕಲರ ಸ್ಥಿತಿ ಚಿಂತಾಜನಕವಾಗಿದೆ. ಇಂತಹ ಸಂದರ್ಭದಲ್ಲಿ ಅಂಬರೀಶ ಅಭಿಮಾನಿಗಳು ಅವರ ನೆರವಿಗೆ ನಿಂತಿರುವುದು ಶ್ಲಾಘನೀಯ ಎಂದರು.

ಬಳಿಕ ಪಟ್ಟಣದ ವಿ.ಸಿ. ಕಾಲೋನಿಗೆ ಭೇಟಿ ನೀಡಿ ಅಲ್ಲಿಯ ಪೌರಕಾರ್ಮಿಕರಿಗೆ ಆಹಾರದ ಕಿಟ್ ವಿತರಿಸಿದರು. ನಂತರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಅಂಬಿ ಸುಬ್ಬಣ್ಣ ಅವರ ಕ್ಯಾಂಟಿನ್‌ ಗೆ ಭೇಟಿ ನೀಡಿದ್ರು. ಈ ವೇಳೆ ಎಸಿ ವಿ.ಆರ್.ಶೈಲಜಾ, ತಹಶೀಲ್ದಾರ್ ಪ್ರಮೋದ್ ಎಲ್.ಪಾಟೀಲ, ತಾ.ಪಂ ಇಒ ಆರ್.ಪಿ.ಮಹೇಶ, ಪುರಸಭೆ ಮುಖ್ಯಾಧಿಕಾರಿ ಮಂಜುನಾಥ, ಪಿಡಿಒ ಶ್ರೀನಿವಾಸ, ಮುಖಂಡರಾದ ಎಲ್.ಸಿ.ಮಂಜುನಾಥ, ಈರೇಗೌಡ, ಮಹದೇವು, ದೀಪು, ಎಸ್.ಅಭಿಷೇಕ, ಎಸ್.ವಿನಯಕುಮಾರ, ಜಲೇಂದ್ರ, ಸೈಯದ ಅಶ್ರಫ ಮುಂತಾದವರು ಇದ್ದರು.




Leave a Reply

Your email address will not be published. Required fields are marked *

error: Content is protected !!