ಮಂಡ್ಯ: ಇವತ್ತಿನ ದಿನಮಾನದಲ್ಲಿ ರೈತರ ಸಮಸ್ಯೆ ಎಷ್ಟಿದೆ ಎಂದು ಅವರಿಗೆ ಮಾತ್ರ ಗೊತ್ತು. ಹೀಗಿರುವಾಗ ತಮ್ಮ ಕಷ್ಟದ ನಡುವೆಯೂ ರೈತ ಮಹಿಳೆಯೊಬ್ಬರು ಸಿಎಂ ಪರಿಹಾರ ನಿಧಿಗೆ ಹಣ ನೀಡಿದ್ದಾರೆ. ಶಾರದಮ್ಮ ಅನ್ನೋ ಮಹಿಳೆ 6 ಸಾವಿರ ರೂಪಾಯಿ ನೀಡಿದ್ದಾರೆ.
ಶೀಳನೆರೆ ಹೋಬಳಿಯ ಹಿರಳಹಳ್ಳಿ ಗ್ರಾಮದ ರೈತ ಮಹಿಳೆ ಶಾರದಮ್ಮ, ಪಟ್ಟಣದ ಮಿನಿ ವಿಧಾನಸೌಧಕ್ಕೆ ಆಗಮಿಸಿ ತಹಶೀಲ್ದಾರ್ ಎಂ.ಶಿವಮೂರ್ತಿ ಅವರ ಮೂಲಕ ಕೋವಿಡ್ 19 ಸಿಎಂ ಪರಿಹಾರ ನಿಧಿಗೆ 6 ಸಾವಿರ ರೂಪಾಯಿ ನೀಡಿದ್ರು. ನಾನು ಕಷ್ಟಪಟ್ಟು ಕೂಡಿಟ್ಟದ್ದ ಹಣವನ್ನ ಜನರ ಕಲ್ಯಾಣಕ್ಕೆ ಬಳಸಿಕೊಳ್ಳಿ. ನನಗೆ 70 ವರ್ಷವಾದ್ರೂ ಆರೋಗ್ಯವಾಗಿದ್ದೇನೆ ಅಂತಾ ಹೇಳಿದ್ರು.
ಇನ್ನು ಪರಿಹಾರ ನಿಧಿಗೆ ಹಣ ನೀಡಿದ ಶರಾದಮ್ಮ ಅವರ ಬಗ್ಗೆ ತಹಶೀಲ್ದಾರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ರು. ಬಳಿಕ ಅವರಿಗೆ ಅಭಿನಂದನ ಪತ್ರ ನೀಡಿ ಗೌರವಿಸಿದ್ರು.