ಪ್ರಜಾಸ್ತ್ರ ಸುದ್ದಿ
ಸಿಂದಗಿ: ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಆಚರಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರ ಮಾತನಾಡಿ, ಮಹಾತ್ಮ ಗಾಂಧಿ ಅವರ ಬದುಕು ಹಾಗೂ ಶಾಸ್ತ್ರಿ ಅವರ ಸರಳ, ಪ್ರಾಮಾಣಿಕ ಆಡಳಿತ, ಜೀವನ ಶೈಲಿ ನಮಗೆಲ್ಲ ಮಾದರಿ. ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಗಾಂಧಿ, ತಮ್ಮ ಚಳವಳಿ, ಹೋರಾಟ, ಉಪವಾಸ ಸತ್ಯಾಗ್ರಹ, ಸ್ವದೇಶಿ ವಸ್ತುಗಳ ಚಳವಳಿ ಸೇರಿದಂತೆ ಇಡೀ ಬದುಕನ್ನು ದೇಶದ ಸ್ವಾತಂತ್ರ್ಯಕ್ಕಾಗಿ ಮೀಸಲಿಟ್ಟು ದೊರಕಿಸಿಕೊಟ್ಟಿದ್ದಕ್ಕೆ ನಾವು ಋಣಿಯಾಗಿರಬೇಕು ಎಂದರು.
ಡಾ.ಮುತ್ತು ಮನಗೂಳಿ, ಸಾಯಬಣ್ಣ ಪುರದಾಳ, ಮುಸ್ತಾಕ್ ಮುಲ್ಲಾ, ಪರಶುರಾಮ ಕಾಂಬ್ಳೆ ಸೇರಿದಂತೆ ಇತರರು ನಾಯಕರಿಬ್ಬರ ಕುರಿತು ಮಾತನಾಡಿದರು. ಈ ವೇಳೆ ಎಂ.ಎ ಖತೀಬ, ಮಹಿಳಾ ಘಟಕದ ಅಧ್ಯಕ್ಷ ಜಯಶ್ರೀ ಹದ್ನೂರ, ವರ್ಷಾ, ವಿಜಯಕುಮಾರ ಯಾಳವಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.