ಮೊಬೈಲ್ ಕಳ್ಳತನವಾದ ಮಡಿಕೇರಿ ಆಸ್ಪತ್ರೆಯಲ್ಲಿ ಮಾಂಗಲ್ಯ ಸರ ಕಳವು

238

ಪ್ರಜಾಸ್ತ್ರ ಅಪರಾಧ ಸುದ್ದಿ

ಮಡಿಕೇರಿ: ಕೋವಿಡ್ ನಿಂದ ಮೃತಪಟ್ಟ ಮಹಿಳೆಯ ಮಾಂಗಲ್ಯ ಸರವನ್ನ ಆಸ್ಪತ್ರೆಯಲ್ಲಿ ಕಳ್ಳತನ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಸೋಮವಾರಪೇಟೆಯ ರಸೂಲಪುರದ ಕಮಲಾ ಅನ್ನೋ ಮಹಿಳೆ ಕೋವಿಡ್ ನಿಂದ ಮೇ 19ರಂದು ಮೃತಪಟ್ಟಿದ್ದಾರೆ. ಇವರ ಮೈಮೇಲಿನ 25 ಗ್ರಾಂ ತೂಕದ ಅಂದಾಜು 1.5 ಲಕ್ಷ ಮೌಲ್ಯದ ಮಾಂಗಲ್ಯ ಸರ ಕಳ್ಳತನ ಮಾಡಲಾಗಿದೆ. ಐಸಿಯುನಲ್ಲಿದ್ದಾಗ ಮಹಿಳೆ ಕಮಲಾ, ಮಗನಿಗೆ ಫೋನ್ ಮಾಡಿ ತನ್ನ ಮಾಂಗಲ್ಯ ಸರ ನರ್ಸ್ ಪಡೆದುಕೊಂಡಿದ್ದಾರೆ ಎಂದು ಹೇಳಿದ್ರಂತೆ.

ತಾಯಿಯ ಅಂತ್ಯಕ್ರಿಯೆ ನೆರವೇರಿಸಿದ ಮಗ ಮೊಣಪ್ಪ, ಮೇ 21ರಂದು ಆಸ್ಪತ್ರೆಗೆ ಬಂದು ಸಿಬ್ಬಂದಿ ತಾಯಿಯ ವಸ್ತುಗಳನ್ನ ಕೇಳಿದ್ದಾರೆ. ಆಗ ಸಿಬ್ಬಂದಿ ಬ್ಯಾಗ್ ನೀಡಿದೆ. ಆದ್ರೆ, ತನ್ನ ಚಿನ್ನದ ಮಾಂಗಲ್ಯ ಸರ ನೀಡಿಲ್ಲವೆಂದು ಆಸ್ಪತ್ರೆಯ ಡೀನ್ ಹಾಗೂ ಪೊಲೀಸರಿಗೆ ಇದೀಗ ದೂರು ನೀಡಿದ್ದಾರೆ.

ಇದೆ ಆಸ್ಪತ್ರೆಯಲ್ಲಿ ಮೊಬೈಲ್ ವೊಂದು ಕಳೆದುಕೊಂಡ ಬಾಲಕಿ ಡಿಸಿ ಹಾಗೂ ಶಾಸಕರಿಗೆ ಪತ್ರ ಬರೆದಿದ್ದು ಭಾರೀ ಸುದ್ದಿಯಾಗಿತ್ತು. ಈಗ ಮಾಂಗಲ್ಯ ಸರ ಕಳ್ಳತನವಾಗಿದೆ. ಇದು ನಿಜಕ್ಕೂ ನಾಚಿಕೆಯ ಕೆಲಸ ಎನ್ನಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!