ಪ್ರಜಾಸ್ತ್ರ ಸುದ್ದಿ
ಆನೇಕಲ್: ಆನೆ ದಾಳಿ ಎರಡು ಎಕರೆಯಲ್ಲಿ ಬೆಳೆದಿದ್ದು ಬಾಳೆ ಬೆಳೆ ಸಂಪೂರ್ಣ ನಾಶವಾಗಿದೆ. ಆನೇಕಲ್ ತಾಲೂಕಿನ ಬನ್ನೇರುಘಟ್ಟ ಹತ್ತಿರದ ಹಕ್ಕಿಪಿಕ್ಕಿ ಕಾಲೋನಿ ರೈತನ ಹೊಲದಲ್ಲಿ ಆನೆಗಳ ಹಿಂಡು ಅವಾಂತರ ಸೃಷ್ಟಿಸಿವೆ.
ಎರಡು ಎಕರೆ ಜಮೀನಿನಲ್ಲಿ ರೈತ ಜಯರಾಮ ಎಂಬುವರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಾಳೆ ಬೆಳೆದಿದ್ರು. ಮೂರ್ನಾಲ್ಕು ತಿಂಗಳಲ್ಲಿ ಬಾಳೆ ಬೆಳೆ ಕೈಗೆ ಬರ್ತಿತ್ತು. ಆದ್ರೆ, ಇದೀಗ ಕಾಡಾನೆ ದಾಳಿಗೆ ಬಾಳೆ ಸಂಪೂರ್ಣ ನಾಶವಾಗಿದೆ.