ಪ್ರಜಾಸ್ತ್ರ ಅಪರಾಧ ಸುದ್ದಿ
ಬೆಂಗಳೂರು: ಯಾವ ಕಾರಣಕ್ಕೆ ಈಗೆಲ್ಲ ಕೊಲೆ ಆಗುತ್ತವೆ ಅನ್ನೋದೇ ಗೊತ್ತಾಗುವುದಿಲ್ಲ. ಸಣ್ಣಪುಟ್ಟ ವಿಚಾರಕ್ಕೆ ಕೊಲೆಗಳು ನಡೆಯುತ್ತಿವೆ. ಸಿಲಿಕಾನ್ ಸಿಟಿಯಲ್ಲಿ ಏನೋ ಮಗ ನೀರು ಕೊಡು ಅಂದಿದ್ದಕ್ಕೆ ಹತ್ಯೆ ಮಾಡಲಾಗಿದೆ.
ಒಬ್ಬ ಆಟೋ ಚಾಲಕನನ್ನು ಮತ್ತೊಬ್ಬ ಆಟೋ ಚಾಲಕ ಕಳೆದ ರಾತ್ರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. 25 ವರ್ಷದ ಸಿದ್ದಿಕ್ ಕೊಲೆಯಾದ ಯುವಕ. ಅಜಯ್ ಅನ್ನೋ ಇನ್ನೊಬ್ಬ ಆಟೋ ಚಾಲಕ ಈ ಕೃತ್ಯವೆಸಗಿದ್ದಾನೆ. ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.