ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಪಿಎಸ್ಐ ನೇಮಕಾತಿ ಹಗರಣದಲ್ಲಿ ಶಾಸಕ ಪರಸಪ್ಪ ದಡೇಸಗೂರ 15 ಲಕ್ಷ ರೂಪಾಯಿ ತೆಗೆದುಕೊಂಡಿರುವ ಸಂಬಂಧ, ಕೆಪಿಸಿಸಿ ಕಚೇರಿಯಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ ಶಿವರಾಜ್ ತಂಗಡಗಿ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ.
ಆಡಿಯೋದಲ್ಲಿರುವುದು ಧ್ವನಿ ನನ್ನದೆ ಎಂದು ಹೇಳುತ್ತಿದ್ದರೂ ಶಾಸಕರನ್ನು ಬಂಧಿಸುತ್ತಿಲ್ಲ. ಹಿರಿಯ ಐಪಿಎಸ್ ಅಧಿಕಾರಿಯನ್ನು ಬಂಧಿಸುವ ಸರ್ಕಾರ, ಶಾಸಕರನ್ನು ಬಂಧಿಸುತ್ತಿಲ್ಲವೆಂದು ವಾಗ್ದಾಳಿ ನಡೆಸಿದರು.
ಸರ್ಕಾರಕ್ಕೆ ಸತ್ಯಾಸತ್ಯೆಯನ್ನು ಹೊರಗೆ ತರಬೇಕು ಅನ್ನೋದು ಇದ್ದಿದ್ದರೆ ನ್ಯಾಯಾಂಗ ತನಿಖೆ ನಡೆಸುತ್ತಿದ್ದರು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ಅಲ್ಲದೆ ಇದೆ ವೇಳೆ ಹಣ ಪಡೆದಿರುವ ವಿಡಿಯೋ ಸಹ ಬಿಡುಗಡೆ ಮಾಡಿದ್ದಾರೆ.