ಪ್ರಜಾಸ್ತ್ರ ಸುದ್ದಿ
ಕೊಪ್ಪಳ: ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಯುವತಿಯರಿಗೆ ಪಿಎಸ್ಐಯೊಬ್ಬರು ಮೋಸ ಮಾಡಿರುವ ಗಂಭೀರ ಆರೋಪ ಕೇಳಿ ಬಂದಿದೆ. ಫಿಂಗರ್ ಪ್ರಿಂಟ್ ವಿಭಾಗದ ಪಿಎಸ್ಐ ಮುತ್ತಪ್ಪ ಬಡಿಗೇರ ವಿರುದ್ಧ ಆರೋಪ ಕೇಳಿ ಬಂದಿದ್ದು, ಪಿಎಸ್ಐ ಎಸ್ಕೇಪ್ ಆಗಿದ್ದಾರಂತೆ.
ವಧು ನೋಡುವ ನೆಪದಲ್ಲಿ ಬಂದು ನಂತರ ಮದುವೆ ಮಾಡಿಕೊಳ್ಳುವುದಾಗಿ ಹೇಳಿ ವಂಚಿಸಿದ್ದಾರೆ ಎಂದು ನಾಲ್ಕೈದು ಯುವತಿಯರು ಎಸ್ಪಿ ಕಚೇರಿ ಎದುರು ಆರೋಪಿಸಿದ್ದಾರೆ. ಅಲ್ದೇ ಮೌಖಿಕ ದೂರ ನೀಡಿದ್ದಾರೆ. ಆದರೆ, ಲಿಖಿತ ದೂರು ಬಂದಿಲ್ಲ. ಈ ಬಗ್ಗೆ ಕೊಪ್ಪಳ ಎಸ್ಪಿ ಟಿ.ಶ್ರೀಧರ್, ಫಿಂಗರ್ ಪ್ರಿಂಟ್ ವಿಭಾಗದ ಎಡಿಜಿಯವರಿಗೆ ಪತ್ರ ಬರೆದಿದ್ದಾರೆ.