ಮರಾಠರಿಗೆ 2ಎ ಮೀಸಲಾತಿ ನೀಡಿ: ಶಾಸಕಿ ನಿಂಬಾಳ್ಕರ್

282

ಪ್ರಜಾಸ್ತ್ರ ಸುದ್ದಿ

ಧಾರವಾಡ: ಬಸವಕಲ್ಯಾಣ ಉಪ ಚುನಾವಣೆಯ ದೃಷ್ಟಿಯಿಂದ ರಾಜ್ಯ ಸರ್ಕಾರ ಕನ್ನಡರಿಗೆ ಮೋಸ ಮಾಡಿ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದೆ ಎಂದು ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸ್ತಿವೆ. ಅಲ್ದೇ, ಡಿಸೆಂಬರ್ 5ರಂದು ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಇದರ ನಡುವೆ ಕಾಂಗ್ರೆಸ್ ಶಾಸಕಿ ಮತ್ತೊಂದು ಪ್ರಸ್ತಾವ ಸಲ್ಲಿಸಿದ್ದಾರೆ.

ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಧಾರವಾಡದಲ್ಲಿ ಮಾತ್ನಾಡಿ, ಮರಾಠ ಅಭಿವೃದ್ಧಿ ನಿಗಮಕ್ಕೆ 50 ಕೋಟಿ, ಲಿಂಗಾಯತ ನಿಮಗಕ್ಕೆ 500 ಕೋಟಿ ಅನುದಾನ ನೀಡಿ ರಾಜಕೀಯ ಗಿಮಿಕ್ ಮಾಡ್ತಿದ್ದಾರೆ. ನಾವು ಚುನಾವಣೆ ತಂತ್ರಿ ಮಾಡ್ತೀವಿ ಅಂದ ಶಾಸಕಿ, ಮರಾಠಿಗೆ 2ಎ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

2ಎ ಮೀಸಲಾತಿ ಬಗ್ಗೆ ಸಿಎಂ 7 ದಿನಗಳೊಳಗೆ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲದೆ ಹೋದ್ರೆ ಬಸವಕಲ್ಯಾಣ, ಮಸ್ಕಿ, ಬೆಳಗಾವಿ ಉಪ ಚುನಾವಣೆ ಜೊತೆಗೆ ಗ್ರಾಮ ಪಂಚಾಯ್ತಿ ಚುನಾವಣೆಗಳನ್ನ ಸಹ ಬಹಿಷ್ಕಿರಿಸುತ್ತೇವೆ ಅನ್ನೋ ಎಚ್ಚರಿಕೆ ನೀಡುವ ಮೂಲಕ ಹೊಸ ಆಟ ಶುರು ಮಾಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!