ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕರೋನಾ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪದೆಪದೆ ಲಾಕ್ ಡೌನ್ ಮಾಡಲಾಗ್ತಿದೆ. ಆದ್ರೆ, ಅದು ಸರಿಯಾಗಿ ಆಗ್ತಿಲ್ಲ. ಇನ್ನು ಸರ್ಕಾರ ಘೋಷಣೆ ಮಾಡಿರುವ ಪರಿಹಾರ ಸಹ ಎಲ್ಲ ವರ್ಗದವರಿಗಾಗಿ ಇಲ್ಲದೆ ಇರುವುದ್ರಿಂದ ಆಕ್ರೋಶ ವ್ಯಕ್ತವಾಗ್ತಿದೆ. ಹೀಗಾಗಿ ಮೇ 24ರ ಸೋಮವಾರ ಜನಾಗ್ರಹ ಆಂದೋಲನದ ವತಿಯಿಂದ ಸ್ವಾಮಿ ನಾವೂ ಬದುಕಬೇಕು ಅನ್ನೋ ವಿಭಿನ್ನ ಹೋರಾಟಕ್ಕೆ ಸಜ್ಜಾಗಿದೆ.
ಸರ್ಕಾರದ ಮುಂದೆ ಜನತೆಯ ಆಗ್ರಹದ ಮೂಲಕ ಪ್ರಮುಖ 5 ಹಕ್ಕೊತ್ತಾಯಗಳನ್ನ ಇಡಲಾಗ್ತಿದೆ. ನಾವು ಬದುಕಬೇಕಾದರೆ ಈ ಪಂಚ ಕ್ರಮಗಳನ್ನಾದರೂ ತೆಗೆದುಕೊಳ್ಳಬೇಕು ಅನ್ನೋ ಕೂಗು ಎದ್ದಿದೆ.