ಪ್ರಜಾಸ್ತ್ರ ಸುದ್ದಿ
ಚಳ್ಳಕೆರೆ: ಕರೋನಾ ಓಡಿಸಲು ಊರಿನ ನಾಲ್ಕು ದಿಕ್ಕಿಗೂ ದಿಗ್ಭಂಧನ ಕಾಯಿ ಕಟ್ಟಿದ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಮುನ್ನೇಕೋಟೆ ಗ್ರಾಮದಲ್ಲಿ ನಡೆದಿದೆ. ಕಳೆದ 25 ದಿನಗಳಲ್ಲಿ 15 ಜನರು ಸಾವನ್ನಪ್ಪಿದ್ದು, ಇದ್ರಿಂದ ಭಯಗೊಂಡು ಮೂಢನಂಬಿಕೆಯ ಮೊರೆ ಹೋಗಿದ್ದಾರೆ.
ಈ ಗ್ರಾಮದಲ್ಲಿ 5 ಜನರ ಕೋವಿಡ್ ನಿಂದ 10 ಜನರು ಇತರೆ ಕಾಯಿಲೆಯಿಂದ 25 ದಿನಗಳಲ್ಲಿ ಮೃತಪಟ್ಟಿದ್ದಾರೆ. 450ಕ್ಕೂ ಹೆಚ್ಚು ಜನರು ಕೆಮ್ಮು, ನೆಗಡಿ, ಜ್ವರದಿಂದ ಬಳಲುತ್ತಿದ್ರೂ ಜನಪ್ರತಿನಿಧಿಗಳು, ಆರೋಗ್ಯ ಅಧಿಕಾರಿಗಳು ಬರದೆ ಇರೋದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರೋನಾದಿಂದ ಭಯಗೊಂಡ ಗ್ರಾಮಸ್ಥರು ಮಂತ್ರಿಸಿದ ತೆಂಗಿನ ಕಾಯಿಯನ್ನ ಊರಿಗೆ ನಾಲ್ಕು ದಿಕ್ಕುಗಳಲ್ಲಿ ದೊಡ್ಡದೊಂದು ಕಂಬ ನೆಟ್ಟು ಕಟ್ಟಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಈಗ್ಲಾದ್ರೂ ಗ್ರಾಮಕ್ಕೆ ತೆರಳಿ ಜನರ ಸಮಸ್ಯೆಗೆ ಸ್ಪಂದಿಸಬೇಕಿದೆ. ಮೂಢನಂಬಿಕೆ ಹೋಗಲಾಡಿಸಬೇಕಿದೆ.