ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಇಲ್ಲಿನ ಫೋಟೋ ನೋಡಿದರೆ ತಕ್ಷಣ ಇದೊಂದು ಮಕ್ಕಳ ಮದುವೆ ಎನಿಸಿಬಿಡುತ್ತೆ. ಆದರೆ, ಇದು ಮಕ್ಕಳ ಮದುವೆಯಲ್ಲ. ಆದರೂ ಅಪರೂಪದ ಮದುವೆ ಕೈವಾರದಲ್ಲಿ ನಡೆದಿದೆ. ಈ ವಾಮನ ಜೋಡಿಯ ವಯಸ್ಸು 28 ಹಾಗೂ 25 ವರ್ಷ.
ದಾಂಪಾತ್ಯ ಜೀವನಕ್ಕೆ ಕಾಲಿಟ್ಟಿರುವ ವರ ವಿಷ್ಣು ಬೆಂಗಳೂರು ಮೂಲದವರು. ವಧು ಜ್ಯೋತಿ ಕೋಲಾರ ಮೂಲದವರು. ಪದವೀಧರ ಜೋಡಿ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಈ ಜೋಡಿ ಕೈವಾರ ಸದ್ಗುರು ತಾತಯ್ಯನವರ ಸನ್ನಿಧಿಯಲ್ಲಿ ಮದುವೆಯಾಗಿದ್ದಾರೆ. ನವಜೋಡಿಗೆ ಜನರು ಶುಭ ಹಾರೈಸಿದರು.